ಚಳ್ಳಕೆರೆ ತಹಶೀಲ್ದಾರ್‌ ರೇಹನ್ ಪಾಷ ಅವರಿಗೆ ಕರ್ನಾಟಕ ಸರ್ಕಾರದಿಂದ ಅಭಿನಂದನಾ ಪತ್ರ ಪ್ರದಾನ ಮಾಡಲಾಗಿದೆ.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ “ಕಂದಾಯ ಗ್ರಾಮ ಯೋಜನೆ”ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ತೋರಿದ ಅಮೂಲ್ಯ ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಗೌರವ ನೀಡಿ ಸನ್ಮಾನಿಸಲಾಗಿದೆ.
ಈ ಅಭಿನಂದನಾ ಪತ್ರವನ್ನು ಕಂದಾಯ ಇಲಾಖೆ ವತಿಯಿಂದ ನೀಡಲಾಗಿದ್ದು, ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಹಶೀಲ್ದಾರ್‌ ರೇಹನ್ ಪಾಷ ಅವರ ಕಾರ್ಯಕ್ಷಮತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಭಿನಂದನಾ ಪತ್ರದಲ್ಲಿ ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಕರ್ನಾಟಕ ಸರ್ಕಾರದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಸಹಿ ಇದೆ.
ಚಳ್ಳಕೆರೆ ತಾಲೂಕಿನಲ್ಲಿ “ಕಂದಾಯ ಗ್ರಾಮ ಯೋಜನೆ” ಯಶಸ್ವಿಯಾಗಿ ಜಾರಿಯಾಗುತ್ತಿರುವುದು ಸಾರ್ವಜನಿಕರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

ಚಳ್ಳಕೆರೆ #ರೇಹನ್ಪಾಷ #ತಹಶೀಲ್ದಾರ್ #ಕರ್ನಾಟಕಸರ್ಕಾರ #ಕಂದಾಯಗ್ರಾಮಯೋಜನೆ #ಅಭಿನಂದನಾಪತ್ರ #ಕಂದಾಯಇಲಾಖೆ #ಮೀನಾನಾಗರಾಜ್ #ರಾಜೇಂದ್ರಕುಮಾರ್ಕಟಾರಿಯಾ #ಕೃಷ್ಣಬೈರೇಗೌಡ

About The Author

Namma Challakere Local News
error: Content is protected !!