ಚಳ್ಳಕೆರೆ :
ಕುಡಿದ ಮತ್ತಿನಲ್ಲಿ ರಸ್ತೆ ಪಕ್ಕ ನಿಂತು ಯುವಕರ ದಾಂದಲೆ ಹಿನ್ನಲೆ.
ರಾತ್ರಿ ಕರ್ತವ್ಯ ನಿರತ ಪೊಲೀಸರಿಂದ ಮನೆಗೆ ಹೋಗುವಂತೆ ಸೂಚನೆ.
ಸಚಿವರ ಆಪ್ತ ಎಂದು ಹೇಳಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಆರೋಪ..!
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ನಡೆದ ಘಟನೆ.
ಸಚಿವ ಡಿ.ಸುಧಾಕರ್ ಆಪ್ತ ಎಂದು ಭರತ್ ರೆಡ್ಡಿ ಅಂಡ್ ಗ್ಯಾಂಗ್ ನಿಂದ ಹಲ್ಲೆ.
ಕರ್ತವ್ಯ ನಿರತ ಪೊಲೀಸ್ ಪೇದೆ ದೇವರಾಜ್ ಹಾಗೂ ನಾಗರಾಜ್ ಮೇಲೆ ಹಲ್ಲೆ.
ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೊಬೈಲ್ ಕಿತ್ತುಕೊಂಡು ಭರತ್ ರೆಡ್ಡಿ ದರ್ಪ.
ರಸ್ತೆ ಪಕ್ಕದಲ್ಲಿ ಕಾರ್ ನಿಲ್ಲಿಸಿಕೊಂಡು ಕಿರಿಕ್ ಶುರು ಮಾಡಿದ್ದ ಭರತ್ ರೆಡ್ಡಿ.
ಇದನ್ನ ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಭರತ್ ರೆಡ್ಡಿ.
ಪೊಲೀಸ್ ಜೀಪ್ ಕೀ ಕಿತ್ತುಕೊಂಡು ದರ್ಪ ಮೆರೆದ ಭರತ್ ರೆಡ್ಡಿ.
SP ಗೆ ಫೋನ್ ಮಾಡ್ಲಾ, DYSP ಗೆ ಫೋನ್ ಮಾಡ್ಲಾ… ಹೇ IG ನಂಬರ್ ಕೊಡ್ರೋ ಎಂದು ಭರತ್ ರೆಡ್ಡಿ ದರ್ಪ
ನಾನು ಸಚಿವ ಸುಧಾಕರ್ ಪಿಎ ಎಂದು ಹೇಳಿ ಪೊಲೀಸರ ಯೂನಿಫಾರ್ಮ್ ಹರಿದು ಹಲ್ಲೆ.
ಎಣ್ಣೆ ಮತ್ತಿನಲ್ಲಿ ಪೊಲೀಸರ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ ಭರತ್ ಅಂಡ್ ಟೀಂ.
ಆರೋಪಿಗಳಾದ ಭರತ್ ರೆಡ್ಡಿ, ಅರುಣ್, ರಾಕೇಶ್ ಮೂವರಿಂದ ಹಲ್ಲೆ ಆರೋಪ..!!
ಸ್ಥಳಕ್ಕೆ ಬಡಾವಣೆ ಠಾಣೆ ಪಿಎಸ್ಐ ರಘು ಭೇಟಿ, ಪರಿಶೀಲನೆ
ಬಡಾವಣೆ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲು

