ಚಳ್ಳಕೆರೆ :
ಹೊಳಲ್ಕೆರೆ: ವಸತಿ ಹಂಚಿಕೆ ಶಾಸಕರಿಂದ ಅವ್ಯವಹಾರ:
ಮಾಜಿ ಸಚಿವರ ಆರೋಪ
ಹೊಳಲ್ಕೆರೆ ಕ್ಷೇತ್ರದಲ್ಲಿ ಗಣಿಬಾಧಿತ ಪ್ರದೇಶಗಳ ವಸತಿ
ಹೀನರಿಗೆ ನೀಡಬೇಕಿದ್ದು, ಅಕ್ರಮವಾಗಿ ಗಣಿ ಬಾಧಿತವಲ್ಲದ
ಪ್ರದೇಶಗಳ ವಾಸಿಗಳಿಗೆ ಹಂಚಲು ಪಟ್ಟಿ ಸಿದ್ಧ ಮಾಡಿದೆ.
ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಪಿಡಿಓಗಳ ಮೇಲೆ ದರ್ಪ
ಮೆರೆದು ಪಟ್ಟಿ ಸಿದ್ಧ ಮಾಡಿಸಿದ್ದಾರೆಂದು ಮಾಜಿ ಸಚಿವ ಹೆಚ್.
ಆಂಜನೇಯ ಆರೋಪಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿ, ಅಕ್ರಮ ನಡೆಯುತ್ತಿದ್ದು, ಇದನ್ನು ಡಿಸಿ
ಅನುಮೋದಿಸಬಾರದು. ಪಟ್ಟಿ ಸಿದ್ಧ ಮಾಡಿದ ಪಿಡಿಓಗಳ ವಿರುದ್ಧ
ಕ್ರಮ ಕೈಗೊಳ್ಳಬೇಕೆಂದರು.

