ಜ.31ಕ್ಕೆ ನಾಯಕನಹಟ್ಟಿ- ಪಟ್ಟಣದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಟಿ. ಬಸಪ್ಪ ನಾಯಕ, ಎಸ್ ಟಿ ಬೋರಸ್ವಾಮಿ ಕರೆ ನೀಡಿದರು.
ನಾಯಕನಹಟ್ಟಿ- ಜನವರಿ 31 ಶನಿವಾರ ಪಟ್ಟಣದಲ್ಲಿ ನಡೆಯುವ ಕುರುಕ್ಷೇತ್ರ ನಾಟಕಕ್ಕೆ ಪ್ರತಿಯೊಬ್ಬ ಕಲಾವಿದರು ಬಂದು ಪ್ರೋತ್ಸಹಿಸಿ ಎಂದು ಟಿ.
ಬಸಪ್ಪ ನಾಯಕ ಹೇಳಿದರು.
ಶುಕ್ರವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಲ್ಲಿ ಕುರುಕ್ಷೇತ್ರ ನಾಟಕದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು.
ಇದೆ ವೇಳೆ ಎಂಬಿ ಬೋರ ನಾಯಕ ಮಾತನಾಡಿ ಕುರುಕ್ಷೇತ್ರ ನಾಟಕದ ಪಾತ್ರಧಾರಿಗಳ ಹೆಸರು ಮತ್ತು ಕುರುಕ್ಷೇತ್ರ ನಾಟಕದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಗೀತ ನಿರ್ದೇಶನ ಕೆ.ಎಂ. ಸಿದ್ದಲಿಂಗಯ್ಯ, ಕುರುಕ್ಷೇತ್ರ ನಾಟಕದ ಪಾತ್ರದಾರಿಗಳಾದ ಶ್ರೀಕೃಷ್ಣ ಎಂ. ಬಿ. ಬೋರಯ್ಯ, ಕರ್ಣ. ಪಿ ರಾಜಣ್ಣ, ಅರ್ಜುನ ವಕೀಲ ಬಿ. ಬೋಸಯ್ಯ ,ದುಶ್ಯಾಸನ ಮತ್ತು ಬಲರಾಮ ಆರ್ ಟಿ ತಿಪ್ಪೇಸ್ವಾಮಿ, ಶಕುನಿ ಬಿ.ಟಿ. ರುದ್ರಮನಿ, ದುರ್ಯೋಧನ ಟಿ ಶ್ರೀಧರ್, ಅಭಿಮನ್ಯು ಮತ್ತು ಸಾತ್ಯಕಿ ಎಂ ಸಂಕ್ರಾಂತಿ ವೆಂಕಟೇಶ್, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಹೋಬಳಿ ಘಟಕ ಅಧ್ಯಕ್ಷ ಕೆ.ಜಿ. ಮಂಜುನಾಥ್, ಉಪಾಧ್ಯಕ್ಷ ಕೆ.ಪಿ. ನಾಗರಾಜ್ , ಉಮೇಶ್ ಇದ್ದರು

