ಬುಡಕಟ್ಟು ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿ.!
ಮಧ್ಯಾಹ್ನದ ಗೌರಸಮುದ್ರ ಮಾರಿ ದೇವಿ ಜಾತ್ರೆ ಸಂಪನ್ನ
ರಾಮಾಂಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ : ಬರದನಾಡು ಎಂದು ಹಣೆ ಪಟ್ಟಿಕೊಂಡ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ ರೀತಿಯಲ್ಲಿ ಬರವಿಲ್ಲ, ಮಳೆ ಬರಲಿ ಬಿಡಲಿ, ಬಿತ್ತಿದ ಬೆಳೆ ಕೈಗೆ ಸಿಗಲಿ ಬಿಡಲಿ ಆದರೆ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗೌರಸಮುದ್ರ ಮಾರಿ ಹಬ್ಬಕ್ಕೆ ಸಲ್ಲುತ್ತದೆ.
ಮುಂಜಾನೆ ಗೌರಸಮುದ್ರ ಗ್ರಾಮದಲ್ಲಿ ನೆಲೆಸಿರುವ ಮಾರಮ್ಮ ದೇವಿ ಜಾತ್ರೆ ನಡೆಯುವ ತುಮುಲು ಪ್ರದೇಶಕ್ಕೆ ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ವಿವಿಧ ವಾಧ್ಯವೃದ್ದದ ಮೂಲಕ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗರ್ಭ ಗಡಿಯಿಂದ ದೇವತೆ ಸಾಗಿದಳು ಇನ್ನೂ ಜಾತ್ರೆ ನಡೆಯುವ ತುಮುಲು ಪ್ರದೇಶದಲ್ಲಿ ಲಕ್ಷಾಂತರ ಭಕ್ತರು ದೇವಿಯನ್ನು ಪೂಜಿಸುತಾ, ತಮಗಮ ಭಕ್ತಿಯನ್ನು ಸಮರ್ಪಿಸಿದರು,ಇನ್ನೂ ಸ್ಥಳದಲ್ಲಿ ಶಾಸಕ ಟಿ.ರಘುಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ, ಇದ್ದರು.
ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಜಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಹೊರಹೊಮ್ಮಿದೆ ಈ ಜಾತ್ರೆಗೆ ವಿಶೇಷವಾದ ಈ ಭಾಗದಲ್ಲಿ ಪ್ರತಿ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಶಕ್ತಿ ಈ ದೇವಿಗಿದೆ ಎನ್ನುತ್ತಾರೆ. ಈ ದೇವಿಗೆ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಸಾಕ್ಷಿಯಾದರು
ಐತಿಹಾಸಿಕ ಹಿನ್ನಲೆ:
ಆಗಸ್ಟ್ 27 ರ ಮಂಗಳವಾರ ಉತ್ಸವ ಮಾರಿ ಹಬ್ಬ ಊರತುಂಬೆಲ್ಲ ಸಡಗರ ಸಂಭ್ರಮ.
ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಬಳಿ ಇರುವ ತುಮ್ಮಲು ಎಂಬಲ್ಲಿ ಮಾರಮ್ಮನ ಸಮಾಧಿ ಇದೆ, ಮತ್ತು ಈ ಸಮಾಧಿ ಬಳಿ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ.
ಸಮೀಪದ ಪಾಳೆಯಗಾರ ಪಟ್ಟುಗಾಳದ ರಾಯದುರ್ಗ ಹಾಗೂ ನಿಡಗಲ್ಲು ಪಾಳೆಯಗಾರರಿಗೆ ಸಂಬಧಿಸಿದಂತೆ ಮಾರಿಯ ಜೀವನದ ಘಟನೆಗಳನ್ನು ಕುರಿತು ನಂಬಲರ್ಹವಾದ ಹಾಗೂ ಆದರ ಪೂರ್ವದಂತ ಕಥೆಗಳು ಇವೆ. ಈ ದೇವಿಯನ್ನು ಆನಾದಿಕಾಲದಿಂದಲೂ ದುರ್ಗಿ, ಕಾಳಿ, ಮಹೇಶ್ವರಿ, ಇಂತೆಲ್ಲ ಹೆಸರುಗಳಿದ ಮತ್ತು ಮಧ್ಯನ ವೇಳೆ ತನ್ನ ಜಾತ್ರೆಯನ್ನು ಆಚರಿಸುಕೊಳ್ಳುವುದರಿಂದ “ಮಧ್ಯಾನದ ಮಾರಿ” ಎಂತಲು ಕರೆಯುತ್ತಾರೆ. ಮಾರಿ ಮಾನವ ಜನ್ಮದಲ್ಲಿ ಹುಟ್ಟಿ ಸಾಧನೆಯ ಸಿದ್ದಿಪಡೆದು ದೈವತ್ವ ಪಡೆತಿದ್ದಾಳೆ ಎಂಬುದರಲ್ಲಿ ಸಂಶಯವಿಲ್ಲ ಎಂಬುದು ದೃಡನಂಬಿಕೆ.
ಗೌರಸಮುದ್ರ ಊರಿನ ಹಿನ್ನಲೆ”
ಗೌರಸಂದ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲ್ಲೂಕು ಕೇಂದ್ರದಿAದ ಈಶಾನ್ಯಕ್ಕೆ ೩೦ ಕಿ.ಮೀ ದೂರದಲ್ಲಿದೆ ಗಡಿ ಹಂಚಿಯನಲ್ಲಿ ಆರವತ್ತರ ದಶಕದಲ್ಲಿ ಮಾರಮ್ಮ ಗುಡಿ ಕೇವಲ ಕಾವಡೆ ಹುಲ್ಲಿನ ಗುಡಿಸಲು, ಗುಡಿಯಾಗಿದ್ದು ಈಗ ಊರೊಳಗೆ ಭವ್ಯ ದೇಗುಲವಾಗಿ ಮಾರ್ಪಟಿದೆ. ಈಕೆಯ ಪಕ್ಕದಲ್ಲಿ ಮ್ಯಾಸ ಬೇಡರ ಬೊಮ್ಮಬೇಡರ ಗುಡಿ ಕೂಡ ಇದೆ. ಈ ಗ್ರಾಮವನ್ನು ಹಿಂದೆ ಗೌರಿ-ಚಂದ್ರ, ಎಂದು ಕರೆಯುತ್ತಿದ್ದರು, ಎಂದು ಪ್ರತಿಥಿ ಇದೆ, ಕಾಲ ಕ್ರಮೇಣ ಉಚ್ಚಾರದಲ್ಲಿ ಗೌರ ಚಂದ್ರ, ಗೌರ್ಚಂದ್ರ, ಗೌಸಂದ್ರ, ಗೌರಸಮುದ್ರವಾಯಿತು, ಆನಂತರ ಇತ್ತಿಚೀನ ಸರ್ಕಾರಿ ದಾಖಲೆಗಳ ಪ್ರಕಾರ ಗೌರಸಮುದ್ರ ಎಂದಿದ್ದಾರೆ. ಇಲ್ಲಿನ ಮಾರಮ್ಮನ ಮೂಲೆ ನೆಲೆ ಗೌರಸಮದ್ರದ ತುಮ್ಮಲು ಎಂಬ ವಿಶಾಲವಾದ ಜಾಗದಲ್ಲಿ ಹುತ್ತದ ರೂಪದಲ್ಲಿ ಸ್ವರೂಪದಲ್ಲಿ ಮಾರಮ್ಮನ ಮೆರೆಮೂರ್ತಿ ಗ್ರಾಮದಲ್ಲಿ ಸಾಮಾನ್ಯವಾಗಿ ಮತ್ತು ಚಳ್ಳಕೆರೆಯಲ್ಲಿ ಕಾಗದ ಮತ್ತು ಬಳೆ ತಯಾರಾಗುತ್ತಿತ್ತು ಈ ಕಾಗದದ ಅಳತೆಗಳು ‘ಗಜ’ ಎಂದು ಹೆಸರಿತ್ತು.
ದೀಪದ ಕಂಬದ ವಿಶೇಷ.:
ಯರಮಂಚನಾಯಕ ಆಗೀನ ಕಾಲದ ದೊರೆಯಾಗಿ ದೇವತೆಯ ಸೇವೆ ಮಾಡುತ್ತಿದ್ದು, ದೇವರ ನಂಬಿಕೆಯ ಪ್ರತೀಕವಾಗಿದೆ. ದೇವಿಯು ಗೌರ ಸಮುದ್ರದಿಂದ ತುಮ್ಮಲುಗೆ ಹೋಗುವ ಹಾದಿಯ ಮಧ್ಯದಲ್ಲಿ ಬಾವುಟ ಇಡಿದು ಮುಂದೆ ಸಾಗಬೇಕು ಮತ್ತು ಈ ತುಮ್ಮಲಿನಲ್ಲಿ ಯರಮಂಚನಾಯಕ ಸುಮಾರು ೨೦ ಅಡಿ ಎತ್ತರದ ಸುಂಧರ ಕಲಾತ್ಮಾಕವಾದ ದೀಪ ಏರಿಸುವ ಕಲ್ಲಿನ ಕಂಬ ನೆಡಿಸಿ (ಸೂರ್ಯನಿಗೆ ನಮಸ್ಕಾರ)ನೀಡಿ ಪವಾಡ ಮೇರೆದ ಈ ಜಾತ್ರೆಯಲ್ಲಿ ಮಾರಿಯ ಹರಕೆ ತೀರಿಸಲು ಭಕ್ತಧಿಗಳು ಬಾಯಿಗೆ ಬಾಯಿ ಬೀಗ ಮತ್ತು ಬೇವಿನ ಸೀರೆ, ಮತ್ತು ಇನ್ನಿತರೆ ಹರಕೆಗಳನ್ನು ತೀರಿಸುತ್ತಾರೆ. ಒಂದತ್ತಿನಿಂದ ಸುಮಾರು ೯ ಜನ ಭಕ್ತಾದಿಗಳು ಒಬ್ಬರ ಮೇಲೆ ಒಬ್ಬರು ನಿಂತು ಸಮೃಧ್ದಿಯ ಸಂಕೇತವಾದ ದೀಪವನ್ನು ಹಚ್ಚಿ ಧೇವಿಗೆ ಶರಣಾದರು.
ಈಗೇ ದೀಪದ ಕಲಂಬವನ್ನು ಏರಿ ಹಣತೆ ಹಚ್ಚಿದ ನಂತರ ಹೊಸದಾಗಿ ಬೆಳೆದ ಈರುಳ್ಳಿ ಸೂರು ಬಿಡುತ್ತಾರೆ, ಮತ್ತು ಸಂಜೆಗತ್ತಲು ಕವಿಯದ ಮುನ್ನೆವೇ ಜಾಗ ಬಿಡುವ ಪಧ್ದತಿ ಹಲವು ದಶಕಗಳಿಂದ ಇದೆ.
ಗೌರಸಮುದ್ರ ಮಾರಮ್ಮನಿಗೆ ೧೪ ಜನ ಸೌರದವರು ಬಾದ್ಯಸ್ತರಾಗಿರುತ್ತಾರೆ :
ಒಂದೇನೆ ಬಂಗಾರಿ, ಕೊಡಗಿನವನು, ಯಂಜಿಮತ್ತಿನವನು, ಬಿಡರಾಮಲ್ಲನು, ದ್ಯಾವರಪ್ಪ, ಸೂಲಿಕನ, ಚೆಂಟಿನವನು ಪಟ್ಟನವನು, ಎಮಲಬ್ಬವನರು ಬಿಲ್ಲೆಬೋರನವನು, ಸಿಲುಕಿನವನು, ಸುಕ್ಕೆಪಾಪನವನು, ಕನಕನವನು, ಮುಡೇಲನವನು, ಇದ್ದರು ಎಂದು ಪುರ್ವಕರ ಬಲವಾದ ನಂಬಿಕೆ.
ಬಾಕ್ಸ್ ಮಾಡಿ :
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ ಶ್ರೀ ಮಾರಿ ಜಾತ್ರೆಗೆ ಭಕ್ತರ ಭಕ್ತಿ ಭಾವನೆಗಳಿಗೆ, ಶ್ರೀ ಮಾರಮ್ಮ ದೇವಿ, ಉತ್ತಮ ಮಳೆ, ಬೆಳೆ ಹಾಗಲಿ ಎಂದು ಆ ದೇವಿಯಲ್ಲಿ ಕೋರುತ್ತೆನೆ.– ಶಾಸಕ ಟಿ.ರಘುಮೂರ್ತಿ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು , ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ..
೨.ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ರಾಜ್ಯವಲ್ಲದೆ ಆಂದ್ರದ ಭಕ್ತಾಧಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಲಕ್ಷಾಂತರ ಭಕ್ತರು ಈ ದೇವಿ ಕೃಪೆಗೆ ಪಾತ್ರರಾದರು, ಸ್ಥಳೀಯ ಶಾಸಕ ಎನ್ವೈ.ಗೋಪಾಲಕೃಷ್ಣ ಸೂಚನೆ ಮೇರೆಗೆ, ಈಗಾಗಲೇ ಗ್ರಾಮ ಪಂಚಾಯಿತಿವತಿಯಿಂದ ಮೂಲ ಭೂತ ಸೌಲಭ್ಯ ನೀಡಿ ಜಾತ್ರೆಯ ಯಶಸ್ವಿಗೆ ದೇವಿಯ ಭಕ್ತರು ಸಾಕ್ಷಿ.
ಎಂ.ಓಬಣ್ಣ ಗ್ರಾಪಂ. ಅಧ್ಯಕ್ಷ ಗೌರಸಮುದ್ರ ಚಳ್ಳಕೆರೆ.
ಪೋಟೋ, ೧ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಯ ಸ್ಥಳಕ್ಕೆ ಆಗಮಿಸುವ ವೇಳೆ ಲಕ್ಷಾಂತರ ಭಕ್ತರು.
ಪೋಟೋ, ೨ ಗೌರಸಮುದ್ರ ತುಮ್ಮಲಿನಲ್ಲಿರುವ ಮಾರಮ್ಮ ದೇವಿ ಗುಡಿಯ ಮುಂದಿನ ದೀಪದ ಕಂಬದ ನೋಟ.
ಪೋಟೋ, ೩ ಗೌರಸಮುದ್ರ ಮಾರಮ್ಮ ದೇವಿ ಗುಡಿಯ ನೋಟ..

