ಚಳ್ಳಕೆರೆ :
ಚಳ್ಳಕೆರೆ ನಗರದಲ್ಲಿ ಸುರಿದ ಮಳೆರಾಯನಿಗೆ ನಗರದ ಚರಂಡಿ ಗಳು ತುಂಬಿ ಹರಿಯುತ್ತಿವೆ ಇನ್ನೂ ರಾಜಕಾಲುವೆ, ಅಕ್ಕಪಕ್ಕದ ಮನೆಗಳ ಗೋಳು ಕೇಳುವವರಿಲ್ಲವಾಗಿದೆ,
ನಗರದ ಹೃದಯ ಭಾಗದ ಇಂಜನಹಟ್ಟಿ ಮಾರ್ಗದ ದೊಡ್ಡ ಚರಂಡಿಗೆ ಅಡ್ಡವಾಗಿ ಪಕ್ಕದ ಇದ್ದ ಕಂಪೌಡ್ ಗೋಡೆ ಕುಸಿದ ಪರಿಣಾಮ ಚಂರಡಿ ಸಂಪೂರ್ಣವಾಗಿ ಕಟ್ಟಿಕೊಂಡು ಚಂರಡಿ ನೀರು ಮುಂದಕ್ಕೆ ಹೋಗದೆ ಅಕ್ಕಪಕ್ಕದ ಮನೆಗಳಿಗೆ ನಿಗ್ಗುವ ಬೀತಿ ಎದುರಾಗಿದೆ.
ಇನ್ನೂ ಸುಮಾರು ಆರು ವಾರ್ಡಗಳ ನೀರು, ಬೆಂಗಳೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ನೀರು, ಈದೇ ಮಾರ್ಗವಾಗಿ ಹರಿಯುವದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರ ಅಳಲಾಗಿದೆ.
ಮಳೆರಾಯನ ಅಟ್ಟಹಾಸಕ್ಕೆ ನಗರದ ಪಾವಗಡ ರಸ್ತೆಯ ಕಲ್ಯಾಣ ಮಂಟಪದ ಮುಂದೆ ಖಾಲಿ ನೀವೇಷನ ತುಂಬಿ ಹೋಂಡಂದಂತಾಗಿದ್ದು ಮಲೀನವಾದ ನೀರು ಗೊಬ್ಬುವಾಸನೆ ಬೀರುತ್ತದೆ, ನಗರಸಭೆ ಅಧಿಕಾರಿಗಳು ಮಾತ್ರ ನಮಗೆ ಗೊತ್ತೆಯಿಲ್ಲ ಎಂಬಂತೆ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ,
ಇನ್ನೂ ಮುಂಜಾನೆ ಗಸ್ತು, ಪೌರಕಾರ್ಮಿಕರೊಟ್ಟಿಗೆ ಅಧಿಕಾರಿಗಳ ಬೇಟಿ ಇಲ್ಲದೆ ನಗರದಲ್ಲಿ ಸಾರ್ವಜನಿಕರು ಗೋಳು ಹೇಳತೀರದಾಗಿದೆ.
ಇನ್ನಾದರೂ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಬೇಟಿ ನೀಡುವರಾ ಕಾದು ನೋಡಬೇಕಿದೆ.

