ಚಳ್ಳಕೆರೆ :
ಮೊಳಕಾಲ್ಕೂರು: ಸಚಿವರಿಂದ ಮೊಳಕಾಲ್ಕೂರಿಗೆ
ಮಲತಾಯಿ ಧೋರಣೆ
ಮೊಳಕಾಲ್ಕೂರು ಭಾಗದಲ್ಲಿ ಅರ್ಧ ಕೆರೆಗಳಿಗೆ ನೀರು ಬರುತ್ತಿದೆ.
ಉಳಿದ ಕೆರೆಗಳಿಗೆ ನೀರು ಬರುವುದಿಲ್ಲ. ಇದರಿಂದ ನಮಗೆ
ಮಲತಾಯಿ ಧೋರಣೆ ಆಗುತ್ತಿದೆ ಎಂದು ರೈತ ಮುಖಂಡ ಬೇಡರೆಡ್ಡಿ
ಹಳ್ಳಿ ಬಸವರೆಡ್ಡಿ ಆರೋಪಿಸಿದರು. ಮೊಳಕಾಲ್ಕೂರಿನಲ್ಲಿಂದು ರೈತರ
ಸಭೆಯಲ್ಲಿ ಮಾತಾಡಿ, ಹಿರಿಯೂರು ಭಾಗದ ಕೆರೆಗಳಿಗೆ ಮಾತ್ರ
ನೀರು ತುಂಬಿಸಲಾಗುತ್ತಿದೆ. ರಾಜಕಾರಣಿಗಳು ಈ ವಿಷಯದಲ್ಲಿ
ಪಕ್ಷಾತೀತವಾಗಿ ನಡೆದುಕೊಳ್ಳಬೇಕಿದೆ. ತಾರತಮ್ಯವನ್ನು
ನಾವು ಖಂಡಿಸಬೇಕಿದೆ. ಆದ್ದರಿಂದ ನಾವು ಸಚಿವರೊಂದಿಗೆ
ಮಾತಾಡಬೇಕಿದೆ ಎಂದರು.

