ಚಳ್ಳಕೆರೆ :
ಹಿರಿಯೂರು: ಸಂಪನ್ನಗೊಂಡ ಶ್ರೀ ತೇರು ಮಲ್ಲೇಶ್ವರನ
ಬ್ರಹ್ಮ ರಥೋತ್ಸವ
ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಿರಿಯೂರು ನಗರದ
ಐತಿಹಾಸಿಕ ಶ್ರೀತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ
ಸಂಪನ್ನಗೊಂಡಿತು.
ವೀರಕರಿಯಣ್ಣ ದೇವರ ನೇತೃತ್ವದಲ್ಲಿ ವಿವಿಧ
ಧಾರ್ಮಿಕ ಪೂಜೆಗೆ ಚಾಲನೆ ನೀಡಿದ ನಂತರ, ಶಿವಧನಸ್ಸಿಗೆ
ಅಭಿಷೇಕ ಮಾಡಿ ದೇವಾಲಯಕ್ಕೆ ತರಲಾಯಿತು. ದೇವಸ್ಥಾನದಲ್ಲಿ
ದೇವರಿಗೆ ಪೂಜೆ ಸಲ್ಲಿಸಿ, ನಂತರ ಅಲಂಕಾರಗೊಂಡ ಬ್ರಹ್ಮರಥದಲ್ಲಿ
ದೇವರನ್ನು ಕೂರಿಸಿ ತಹಸೀಲ್ದಾರ್ ಸಿ. ರಾಜೇಶ್ ಕುಮಾರ್ ಪೂಜೆ
ಸಲ್ಲಿಸಿದರು.

