ಚಳ್ಳಕೆರೆ : ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ತಾಲ್ಲೂಕು ಸಮಿತಿ ಹಿರಿಯೂರುನಲ್ಲಿ ಸೋಮವಾರ ದಂದು ,ನಗರದ ಪ್ರವಾಸಿ ಮಂದಿರದಲ್ಲಿ, ಕರುನಾಡ ದಲಿತ ಚಳುವಳಿಯ ರುವಾರಿ, ಸ್ವಾಭಿಮಾನದ ಹಣತೆಯನ್ನು ಹಚ್ಚಿದ , ಕ್ರಾಂತಿಯ ಕಿಡಿ ಪ್ರೊ ಬಿ ಕೃಷ್ಣಪ್ಪಾಜಿ ರವರ ಜನ್ಮದಿನಾಚರಣೆಯನ್ನು, ಸರಳವಾಗಿ ಆಚರಿಸಲಾಯಿತು…
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮಮ್ಮ, ಜಿಲ್ಲಾಧ್ಯಕ್ಷರಾದ ಎನ್ ಪ್ರಕಾಶ್, ಉಪಾಧ್ಯಕ್ಷರಾದ ಮಹಾಲಿಂಗಪ್ಪ ಉಪ್ಪಳಗೆರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ಯಾಡರಹಳ್ಳಿ ಹನುಮಂತರಾಯ, ತಾಲ್ಲೂಕು ಉಸ್ತುವಾರಿಗಳಾದ ರಾಘವೇಂದ್ರ ಈಶ್ವರಗೆರೆ, ಸಂಯೋಜಕರಾದ ನರಸಿಂಹಮೂರ್ತಿ (ಬಾಬಣ್ಣ), ತಾಲ್ಲೂಕು ಅಧ್ಯಕ್ಷರಾದ ಜಗದೀಶ್ ಅಬ್ಬಿನಹೊಳೆ, ಉಪಾಧ್ಯಕ್ಷರಾದ ಚಂದ್ರಣ್ಣ ಎಂ ಡಿ ಕೋಟೆ, ಖಜಾಂಚಿಗಳಾದ ರಂಗಸ್ವಾಮಿ ಹುಚ್ಚವ್ವನಹಳ್ಳಿ ,ಕಲಾವಿದ ಕೂನಿಕೆರೆ ಮಾರುತೇಶ್ ಮುಖಂಡರಾದ ಲಕ್ಷ್ಮಿಕಾಂತ್ ,ಮೈಗಣ್ಣ , ಆದರ್ಶ, ಗ್ರಾಮ ಪಂಚಾಯಿತಿ ಸದಸ್ಯರಾದ ಕೂಡ್ಲ ಹಳ್ಳಿ ಜಗದೀಶ್, ಓಂಕಾರ್ ಮಸ್ಕಲ್ ಮಟ್ಟಿ ಇನ್ನೂ ಅನೇಕರು ಉಪಸ್ಥಿತರಿದ್ದರು…
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್ ಪ್ರಕಾಶ್ ರವರು ಮಾತನಾಡಿ ಪ್ರೊ ಬಿ ಕೃಷ್ಣಪ್ಪಾಜಿ ರವರ ಹೋರಾಟದ ಬಗ್ಗೆ ಸವಿವರವಾಗಿ ತಿಳಿಸಿದರು…

