ಚಳ್ಳಕೆರೆ :
ಚಿತ್ರದುರ್ಗ: ಹಳೆಯ ಟ್ಯಾಂಕ್ ನಿಂದ ನೀರು ಪೂರೈಕೆ
ಗ್ರಾಮಸ್ಥರಲ್ಲಿ ಆತಂಕ
ಪ್ರತಿಯೊಬ್ಬರಿಗೂ ಶುದ್ಧ ಕುಡಿವ ನೀರು ಪೂರೈಸುವುದು ಸರ್ಕಾರದ
ಆಶಯ. ಆದರಂತೆ ಹಳೆಯ ನೀರು ಸಂಗ್ರಹಕಾರ ಟ್ಯಾಂಕ್
ನ್ನು ಸ್ವಚ್ಚಗೊಳಿಸಬೇಕೆಂಬ ಸರ್ಕಾರದ ನಿರ್ದೇಶನವಿದೆ.
ಆದರೆ
ಚಿತ್ರದುರ್ಗದ ಹುಲ್ಲೇಹಾಳ್ ಟ್ಯಾಂಕ್ ಅತ್ಯಂತ ಹಳೆಯದಾಗಿದೆ.
ಇಲ್ಲಿಂದಲೇ ಕುಡಿಯಲು ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದೆ.
ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಸ್ವಚ್ಛತೆ
ಇಲ್ಲದಿರುವ ನೀರು ಕುಡಿದು ಅನಾರೋಗ್ಯಕ್ಕೀಡಾಗುವ ಮೊದಲು,
ಗ್ರಾಪಂ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಹೇಳುತ್ತಾರೆ.

