ಚಳ್ಳಕೆರೆ : ದೇಶ ಬಲಿಷ್ಟವಾಗಬೇಕಾದರೆ ಮತದಾರ ಪ್ರಭುಗಳು ಬಲಿಷ್ಠರಾಗಬೇಕು, ಮೀಸಲಾತಿ ಪ್ರತಿಯೊಂದು ಜಾತಿಗೆ ಇದೆ ಆದರೆ ಕೇವಲ ಡಾಂಬಿಕತೆಗೆ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರನ್ನು ಮಾತ್ರ ಸಿಲುಕಿಸುತ್ತಾರೆ, ಮಾನವನ ಮೌಲ್ಯಗಳನ್ನು ಪ್ರಪಂಚದ್ಯಾAತ ಬಿತ್ತಿದ್ದ ಮಹಾನ್ ಯುಗ ಪುರುಷ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಇಂದು ನಾವು ರಕ್ಷಿಸುವ ಕೆಲಸವಾಗಬೇಕಿದೆೆ ಎಂದು ಪತ್ರಕರ್ತ ಹೊನ್ನುರು ಮಾರಣ್ಣ ಹೇಳಿದರು
ಅವರು ತಾಲೂಕಿನ ಹೊನ್ನೂರು, ತೊರೆಕೊಲಮ್ಮನಹಲ್ಳಿ ಗ್ರಾಮದಲ್ಲಿ ಆಯೋಜಸಿದ್ದ ಸರಳ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರದಮಲ್ಲಿ ಅಂAಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.
ಇನ್ನೂ ಇದೇ ಸಂಧರ್ಭದಲ್ಲಿ ಜಯಶೀಲರೆಡ್ಡಿ ಮಾತನಾಡಿ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತಮ್ಮದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಆದರೆ ನೌಕರಿ ವರ್ಗದ ಆಡಳಿತ ಶಾಯಿಯಲ್ಲಿ ನಿವೃತ್ತಿ ಹೊಂದಿದ ಮೇಲೆ ಸಮಾಜದ ತಮ್ಮ ಜಾತಿ ವರ್ಗಗಳ ಮೇಲೆ ಆಧಮ್ಯೆ ಮೋಹದ ಮೂಲಕ ಸೇವೆ ಸಲ್ಲಿಸುವುದು ಉತ್ತಮ ಬೆಳವಣಿಗೆ ಆದರೆ ಈ ಬೆಳವಣಿಗೆ ಸೇವೆಯಲ್ಲಿರುವಾಗ ಸಲ್ಲಿಸಿದರೆ ಉತ್ತಮ ಎಂದರು.
ಇದೇ ಸಂಧರ್ಭದಲ್ಲಿ ಹೊನ್ನೂರು ಗ್ರಾಮದ ಬಾಬು, ಅಂಜಿನಪ್ಪ, ನಾಗೇಂದ್ರ, ಉಮೇಶ್, ಇತರರು ಇದ್ದರು.