ಚಳ್ಳಕೆರೆ : ರಾಜಾಕೀಯ ಪಕ್ಷಗಳಲ್ಲಿ ಟಿಕೆಟ್ ಗಿಟ್ಟಿಸಿ ಮತದಾರರನ್ನು ಮನ ಸೇಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿರುವದು ಒಂದೆಡೆಯಾದರೆ ಕಡ್ಡಾಯ ಮತದಾನ ಮಾಡಬೇಕು ಪ್ರಜಾಪ್ರಭಯತ್ವದ ಉಳಿವಿಗೆ ನಿಮ್ಮ ಮತದಾನ ಶ್ರೇಷ್ಠಾವಾಗಿದೆ ಎಂದ ಅಧಿಕಾರಿಗಳು ಮತದಾರನಿಗೆ ಮನಹೋಲಿಸುವುದು ಮತ್ತೊಂದೆಡೆ ಕಾಣಸಿಗುತ್ತದೆ.
ಒಟ್ಟಾರೆ ಆಯಿಲ್ ಸಿಟಿಯಲ್ಲಿ ರಾಜಾಕೀಯ ಚಿತ್ರಣವೇ ಬೇರೆಯಾಗಿರುವುದಂತ ಸತ್ಯ
ಅದರಂತೆ ತಾಲೂಕು ಸ್ವೀಪ್ ಸಮಿತಿಯಿಂದ ಇಂದು ಸರ್ಕಾರಿ ನೌಕರಿಂದ ಮತದಾನ ಜಾಗೃತಿಗೆ ಬೈಕ್ ರಾಲಿ ಮಾಡುವ ಮೂಲಕ ಮತದಾನ ಹೆಚ್ಚಳಕ್ಕೆ ವಿವಿಧ ಬೀದಿಗಳಲ್ಲಿ ಜಾಗೃತಿ ಮೂಡಿಸಿದರು.
ಇನ್ನೂ ಸಂಜೆ ಏಳರ ನಂತರ ಎಲ್ಲಾ ನಾಗರೀಕರು ಮೊಬೈಲ್ ಟಾರ್ಚ್ ಬಿಡುವ ಮೂಲಕ ವಿಭಿನ್ನವಾದ ಕಾರ್ಯಕ್ರದಮಲ್ಲಿ ಮತದಾನ ಜಾಗೃತಿಗೆ ಕೈ ಜೋಡಿಸಿದರು.
ಅದರಂತೆ ಪ್ರವಾಸಿ ಮಂದಿರದಿAದ ಪ್ರಾರಂಭವಾದ ಮತದಾನ ಜಾಗೃತಿ ಮೆರವಣಿಗೆ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ ಈಗೇ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ªಮತದಾನ ಪ್ರತಿಜ್ಞಾನ ವಿಧಿಯನ್ನು ಸ್ವೀಕರಿಸಿದರು.
ಇದೇ ಸಂಧರ್ಭದಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಇಓ.ಹೊನ್ನಯ್ಯ, ಪೌರಾಯುಕ್ತ ರಾಮಕೃಷ್ಣಪ್ಪ, ಬಿಇಓ.ಕೆ.ಎಸ್.ಸುರೇಶ್, ಇತರ ಶಿಕ್ಷಣ ವರ್ಗದ ಸಿಬ್ಬಂದಿ, ತಾಪಂ.ಸಿಬ್ಬAದಿ, ಚುನಾವಣೆ ಸಿಬ್ಬಂದಿ, ನಾಗರೀಕರು ಪಾಲ್ಗೊಂಡಿದ್ದರು.

Namma Challakere Local News
error: Content is protected !!