ಚಳ್ಳಕೆರೆ : ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ ಎಂದು ಶಾಸಕ ಟಿ,ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ನೇಕಾರರ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,

ಬಸವಣ್ಣ, ದೇವರದಾಸಿಮಯ್ಯ ಹೀಗೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ತಾಂತ್ರಿಕ ಯುಗಕ್ಕೆ ಉಪಕಸುಗಳು ಕಣ್ಮರೆಯಾಗುತ್ತಿದ್ದು ನೇಕಾರರ ಬುದುಕು ಅಂತAತ್ರವಾಗಿದ್ದು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುಸುವುದರಿಂದ ಆರ್ಥಿವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ, ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ದಾರ್ಶನಿಕರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ರೇಹಾನ್ ಪಾಷಾ ಮಾತನಾಡಿ, ದೇವರ ದಾಸಿಮಯ್ಯ ಅವರು ಆದರ್ಶ ಪ್ರಾಯರು. ನೇಯ್ಗೆ ಕೆಲಸ ನಿರ್ವಹಿಸುತ್ತಾ ಆರ್ಥಿಕ ಜೀವನ ಕಟ್ಟಿಕೊಂಡು ಸಾಮಾಜಿಕವಾಗಿ, ಧಾರ್ಮಿಕವಾಗಿ ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯ ಮಾಡಿದರೂ ಸಹ ನಮ್ಮ ಕಾಯಕ ವೃತ್ತಿ ಮರೆಯಬಾರದು. ಕಾಯಕ ವೃತ್ತಿಯ ಜೊತೆಯಲ್ಲಿ ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದು ತಿಳಿಸಿಕೊಟ್ಟ ಆದರ್ಶಪ್ರಾಯ ವ್ಯಕ್ತಿ ದೇವರ ದಾಸಿಮಯ್ಯ. ಎಂದು ಹೇಳಿದರು.
ಈದೇ ಸಂಧರ್ಭಲ್ಲಿ ಸಮಾಜದ ಮುಖಂಡರಾದ ರುದ್ರಪ್ಪ, ಪೀತಾಂಬರ್ ದೇವರ ದಾಸಿಮಯ್ಯ ನವರ ಬಗ್ಗೆ ಮಾತನಾಡಿದರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಜೆ.ರಾಘವೇAದ್ರ, ಸದಸ್ಯ, ವೀರಭದ್ರಪ್ಪ, ಸಮಾಜದ ಮುಖಂರಾದ ಎಸ್.ಟಿ.ಎಸ್.ತಿಪ್ಪೇಸ್ವಾಮಿ, ಪ್ರಹ್ಲಾದ್, ರವಿಕುಮಾರ್, ಗೌರಮ್, ನಾಗಭೂಷಣ್,ಜಯರಾಂ, ಬಿಇಒ ಕೆ.ಎಸ್.ಸುರೇಶ್, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ರೇಷ್ಮೆ ಅಧಿಕಾರಿ ಕೆಂಚೋಜಿ ರಾವ್, ಕೃಷಿ ಅಧಿಕಾರಿ ಮೇಘನ,ಆಹಾರ ಇಲಾಕೆ ಶ್ರೀನಿವಾಸ್ ಇತರರಿದ್ದರು.

ಪೋಟೋ ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ನೇಕಾರರ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಟಿ,ರಘುಮೂರ್ತಿ ಮಾತನಾಡಿದರು.

Namma Challakere Local News
error: Content is protected !!