ಚಳ್ಳಕೆರೆ : ಮನುಷ್ಯನ ಕೊನೆಯ ದಿನಗಳಲ್ಲಿ ಅವನ ಸದ್ಗತಿಗೆ ಅವಶ್ಯವಾಗಿ ಸ್ಮಶಾನಕ್ಕೆ ಜಾಗ ಬೇಕಾಗುತ್ತದೆ ಇಂತಹ ಜಮೀನನ್ನು ಕೂಡ ಒತ್ತುವರಿ ಮಾಡಿ ಮನುಷ್ಯರು ಸ್ವಾರ್ಥಿಗಳಾಗುವುದು ತುಂಬಾ ವಿಷಾದದ ಸಂಗತಿ, ಬದುಕುವುದು ಮೂರೇ ದಿನ ಆದರೂ ಕೂಡ ಆದರ್ಶವಾಗಿ ಬದುಕಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.

ಅವರು ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಸರ್ವೆ ನಂಬರ್ 112 ರಲ್ಲಿರುವಂತ ಸ್ಮಶಾನದ ವಿವಾದವನ್ನು ಇತ್ಯರ್ಥ ಪಡಿಸಿ, ಎರಡು ಎಕರೆ ಜಮೀನನ್ನು ಸ್ಮಶಾನಕ್ಕೋಸ್ಕರ ಮೀಸಲಿಟ್ಟಿದ್ದು ಈ ಜಮೀನನ್ನು ಒತ್ತುವರಿ ಮಾಡಿ ಕೃಷಿಗೆ ಬಳಸಿಕೊಂಡಿದ್ದು ಇದನ್ನು ಬಿಡಿಸಿ ಹದ್ದು ಬಸ್ತು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡಿ.15ರಂದು ಗ್ರಾಮದ ಸಾರ್ವಜನಿಕರು ತಾಲೂಕು ಕಚೇರಿಗೆ ಭೇಟಿ ನೀಡಿ ತಹಸಿಲ್ದಾರ್ ಅವರನ್ನು ಆಗ್ರಹಿಸಿದ್ದರು ಇವರ ಮನವಿಗೆ ಸ್ಪಂದಿಸಿದ ತಹಸಿಲ್ದಾರ್ ಇಂದು ಸರ್ವೆ ಸಿಬ್ಬಂದಿ ಕಂದಾಯ ಇಲಾಖೆಯ ರಾಜ್ಯಶ್ವ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿ ಅಳತೆ ಮಾಡಿಸಿ ಒತ್ತುವರಿದಾರರಿಂದ ವಶಕ್ಕೆ ಪಡೆದರು.
ನಂತರ ಮಾತನಾಡಿದ ಅವರು, ಮನುಷ್ಯ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಸಮಾಜದಲ್ಲಿ ಅದೆಷ್ಟೋ ಜನರ ಆದರ್ಶದ ವ್ಯಕ್ತಿಗಳು ನಮ್ಮ ಮುಂದಿ ಇದ್ದಾರೆ, ಸ್ಮಶಾನದ ಜಮೀನನ್ನು ಒತ್ತುವರಿ ಮಾಡುವುದು ಶೋಭೆ ತರುವುದಿಲ್ಲ ಎಂದು ಒತ್ತುವರಿದಾರರಿಗೆ ಮನಪರಿವರ್ತಿಸಿ ಹೊತ್ತುವರಿಯಾಗಿರುವಂತಹ ಜಮೀನನ್ನು ಪುನಃ ಸರ್ಕಾರಕ್ಕೆ ವಾಪಸ್ ಪಡೆಯಲು ಯಶಸ್ವಿಯಾದರು
ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆರೆಕುಂಟೆ ಹಳ್ಳ ದಾರಿ, ಗೋಮಳ ರಾಜಕಾಲುವೆ ಮುಂತಾದವುಗಳನ್ನು ಹೊತ್ತುವರಿ ಮಾಡಿಕೊಳ್ಳಲು ಯಾರೂ ಕೂಡ ಮುಂದಾಗಬಾರದೆAದು ಮನವಿ ಮಾಡಿದರು,

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ರಾಜಸ್ವ ಚೇತನ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಪುಷ್ಪಲತಾ, ಸರ್ವೆ ಬಸವರಾಜು, ಮುಂತಾದವರು ಉಪಸ್ಥಿತರಿದ್ದರು

Namma Challakere Local News

You missed

error: Content is protected !!