ಮಾತಿಗೆ ತಪ್ಪಿದ ಮುಖ್ಯ ಮಂತ್ರಿ : ರೆಡ್ಡಿಹಳ್ಳಿ ವೀರಣ್ಣ ಆರೋಪ
ಚಳ್ಳಕೆರೆ : ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಕೈ ಬಿಡಲು ಕೇಂದ್ರ ಸರಕಾರ ಆದೇಶ ಜಾರಿ ಮಾಡಿತ್ತು, ಆದರೆ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ರಾಜ್ಯ ಸರಕಾರ ವಿಫಲಾವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಸರಕಾರದ ವಿರುದ್ದ ಕಿಡಿಕಾರಿದರು.
ಅವರು ನಗರದಿಂದ ದೆಹಲಿ ಚಲೋ ಹೊರಡುವ ಮೂಲಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಬೊಮ್ಮಯಿ ಮಾತಿಗೆ ತಪ್ಪಿದ ಮುಖ್ಯ ಮಂತ್ರಿಯಾಗಿದ್ದಾರೆ.
ಕಳೆದ ದಿನಗಳಲ್ಲಿ ಸುಮಾರು 130 ಸಂಘಟನೆಗಳ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿದಾಗ ಮೂರು ಕಾಯ್ದೆಗಳ ವಾಪಸ್ಸು ಪಡೆಯಲು ಸರಕಾರ ಆದೇಶ ನೀಡಿತ್ತು, ಆದರೆ ಈಗ ರಾಜ್ಯ ಸರಕಾರ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ದೆಹಲಿ ಚಲೋ ಮೂಲಕ 13 ರಾಜ್ಯಗಳ ರೈತರು ಈ ಚಳುವಳಿಯಲ್ಲಿ ಮೂರು ದಿನಗಳ ಕಾಲ ಅಧ್ಯಯನ ಸಭೆ ನಡೆಸಿ ಸರಕಾರಕ್ಕೆ ಒತ್ತಡ ತರಲಾಗುವುದು, ರಾಜ್ಯದಿಂದ 5 ರಿಂದ 6 ಸಾವಿರ ರೈತರು ಭಾಗವಹಿಸಿಲಿದ್ದಾರೆ.
ಇನ್ನೂ ಮುಖ್ಯವಾಗಿ ರೈತರು ಬೆಳೆದ ಬೆಳೆಗೆ ಎಂಎಸ್‌ಪಿ ಬೆಲೆ ನಿಗಧಿ ಮಾಡಬೇಕು ಒಟ್ಟಾರೆ ರೈತರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವಂತೆ ದೆಹಲಿ ಚಲೋ ಹೊರಟಿದ್ದೆವೆ ಎಂದರು.

Namma Challakere Local News
error: Content is protected !!