ಗ್ರಾಮದಲ್ಲಿ ಸ್ನೇಹಮಹಿ ಜೀವನ ನಡೆಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಕರೆ
ಚಳ್ಳಕೆರೆ ತಾಲೂಕಿನ ಬೊಮ್ಮನ ಕುಂಟೆ ಗ್ರಾಮದಲ್ಲಿ ಸಾರ್ವಜನಿಕರ ದಾರಿ ವಿವಾದಕ್ಕೆ ತೆರೆ ಎಳೆದು ಗ್ರಾಮದಲ್ಲಿ ಸಾಮರಸ್ಯ ಜೀವನ ನಡರಸಬೇಕು ತಹಶಿಲ್ದಾರ್ ಎನ್ ರಘುಮೂರ್ತಿ ಸಾರ್ವಜನಿಕರಿಗೆ ಕಿವಿ ಮಾತು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ರಸ್ತೆ ಸಮಸ್ಯಯಿಂದ ಹೈರಾಣದ ಜನರಿಗೆ ಇಂದು ಪರಿಹಾರ ದೊರಕಿಸಿಕೊಟ್ಟಿದ್ದಾರೆ
ಗ್ರಾಮದ ಸರ್ವೆ ನಂಬರ್ 65 ಮತ್ತು 68ರ ಬಾರಿ ವಿವಾದಕ್ಕೆ ಸಂಬAಧಿಸಿದAತೆ ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ಕಾಂತರಾಜು ಅವರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತಾಲೂಕ್ ಸರ್ವೆರ್ ಅವರಿಂದ ಅಳತೆ ಮಾಡಿಸಿ ಸಾರ್ವಜನಿಕ ದಾರಿಗೆ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳೊಂದಿಗೆ ಚರ್ಚಿಸಿ ಸಮಸ್ಯೆ ತಿಳಿಗೊಳಿಸಿ.
ಜೆಸಿಬಿಯಿಂದ ವಿವಾದಿತ ಜಮೀನಿನ ಸಮತಟ್ಟು ಮಾಡಿಸಿ ರಸ್ತೆ ನಿರ್ಮಾಣ ಮಾಡಿಸಿದರು

ನಂತರ ಸಾರ್ವಜನಿಕರನ್ನು ಉದ್ದೇಶಿ ಮಾತನಾಡಿ ತಹಶೀಲ್ದಾರ್ ಈಗ ನಿರ್ಮಾಣ ಮಾಡುತ್ತಿರುವ ರಸ್ತೆಗೆ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ಉದ್ಯೊಗ ಖಾತ್ರಿ ಅನುದಾನದಲ್ಲಿ ಪಕ್ಕ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮಸ್ಥರಿಗೆ ಸೂಚಿಸಿದರು

ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಯಾವುದೇ ಸ್ವತ್ತುಗಳನ್ನು ಒಂದು ವೇಳೆ ಗ್ರಾಮಕ್ಕೆ ಜಮೀನು ಬೇಕಾದಲ್ಲಿ ಸರ್ಕಾರದ ವತಿಯಿಂದಲೇ ಗುರುತಿಸಿ ಸಂಬAಧಿಸಿದ ಪಂಚಾಯಿತಿಗೆ ಜಮೀನನ್ನು ಹಸ್ತಾಂತರ ಮಾಡಲಾಗುವುದು.

ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಪರಶುರಾಂಪುರ ಪಿಎಸ್ಐ ಕಾಂತರಾಜು, ತಾಲೂಕ್ ಸರ್ವೆಯರ್ ಪ್ರಸನ್ನ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಬಸವರಾಜು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು
ಚಳ್ಳಕೆರೆ : ಚಿತ್ರದುರ್ಗ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗದ ಜಿಲ್ಲಾಯ ಎಲ್ಲಾ ಅಲ್ಪ ಸಂಖ್ಯಾತರ ನೇತೃತ್ವ ವಹಿಸುವ ಮೂಲಕ ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ

ಇವರನ್ನು ಜಿಲ್ಲಾ ಅಲ್ಪಸಂಖ್ಯಾತರ ವಿಭಾದ ಉಪಾಧ್ಯಕ್ಷನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಅಬ್ದುಲ್ ಶವಲಿ ಆದೇಶ ಪತ್ರ ನೀಡಿ ಅಭಿನಂದಿಸಿದ್ದಾರೆ.

ಈದೇ ಸಂಧರ್ಭದಲ್ಲಿ ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪಿ.ಬಾಬು, ಸಾಧಿಕ್, ವಸಿಂ, ರೆಹಮನ್, ಇಸ್ಮಾಯಿಲ್, ಇತರರು ಪಾಲ್ಗೊಂಡಿದ್ದರು.
ಚಳ್ಳಕೆರೆ : ಎಲ್ಲಾರೋಳಗೆಒಂದಾಗಿ ಕಾರ್ಯ ನಿರ್ವಹಿಸುತ್ತಿದೆ.

ಆಹಾರ ನಿರೀಕ್ಷಕರಾಗಿ ಸೇವೆ ಸಲ್ಲಿಸಿ
ಪದನ್ನೋತ್ತಿಹೊಂದಿ ದಾವಣಗೆರೆ ಸಹಯಾಕನಿರ್ದೇಶಕರಾಗಿ ಹೋಗುತ್ತಿರುವ ಶಿವಾಜಿ ರವರ ಜೀವನ ಸುಖವಾಗಿರಲಿ ಎಂದು ಆರೈಸಿದರು.

Namma Challakere Local News
error: Content is protected !!