ಚಳ್ಳಕೆರೆ : ಪ್ರಪ್ರಥಮ ಬಾರಿಗೆ ಹೊಬಳಿ ಮಟ್ಟದ ವಿವಿಧ ಕ್ರೀಡೆಯಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡ ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆ

ಚಳ್ಳಕೆರೆ : ಪ್ರಥಮ ಬಾರಿಗೆ ಹೊಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಶಾಲೆಯ ಮಕ್ಕಳು ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ನಮ್ಮ ಶಾಲೆಗೆ ಕೀರ್ತಿ ತಂದಿರುವುದು ಶ್ಲಾಘನೀಯ ಎಂದು ಶಾಲೆಯ ಕಾರ್ಯದರ್ಶಿ ಪಿ.ದಯಾನಂದ್ ಹೇಳಿದ್ದಾರೆ.


ಅವರು ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲವು ಸಮಾನವಾಗಿ ಸ್ವೀಕರಿಸಬೇಕು ಆದರೆ ನಮ್ಮ ಶಾಲೆಯಿಂದ ಈ ಬಾರಿ ಪ್ರಪ್ರಥಮ ಬಾರಿಗೆ ಶಾಲೆಯಿಂದ ಮಕ್ಕಳು ಭಾಗವಹಿಸಿ ಕೀರ್ತಿ ತಂದಿರುವುದು ಸಂತಸ ತಂದಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಡಿ.ವಿ.ಎನ್.ಪ್ರಸಾದ್ ಮಾತನಾಡಿ, ಕಸಬಾ ಮಟ್ಟದ ಕ್ರೀಡಾ ಕೂಟದಲ್ಲಿ ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಮುಂದಿನ ಕ್ರೀಡೆಗಳಿಗೆ ದಾರಿದೀಪವಾಗಿದೆ ಎಂದರು.


ಇದೇ ಸಂಧರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಡಿ.ಶಿವಪ್ರಸಾದ್, ಕಿರಣ್, ಅಧ್ಯಕ್ಷ ರಾಜೇಶ್ ಗುಪ್ತ, ಮುಖ್ಯ ಶಿಕ್ಷಕರಾದ ಶೋಭಾ, ಸಹ ಶಿಕ್ಷಕರಾದ ಶೈಲಜಾ, ಹಾಗೂ ಶಿಕ್ಷಕ ವೃಂಧ ಕ್ರೀಡಾ ಪಟುಗಳಿಗೆ ಹಾಗೂ ದೈಹಿಕ ಶಿಕ್ಷಕ ರಘು, ಟೀಂ ಮ್ಯಾನೆಜರ್ ಸಿದ್ದೇಶ್ ಇವರಿಗೆ ಶಾಲೆಯ ಆಡಳಿತ ಮಂಡಳಿಯಿAದ ಅಭಿನಂಧನೆ ಸಲ್ಲಿಸಿದರು.


ಕ್ರೀಡೆಯಲ್ಲಿ ಗಳಿಸಿದ ಸ್ಥಾನಗಳು :


ಪ್ರೌಢಶಾಲಾ ಕ್ರೀಡಾ ವಿಭಾಗದಲ್ಲಿ ಬಾಲಕರು ಹಾಗೂ ಬಾಲಕಿಯರು ಷಟಲ್ ಬ್ಯಾಡ್ಮಿಂಟನ್ ಕ್ರೀಡಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇನ್ನೂ ಅಥ್ಲೆಟಿಕ್ ಕ್ರೀಡಾ ವಿಭಾಗದಲ್ಲಿ ಜಾವಲಿನ್ ಥ್ರೋ ನಲ್ಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.


ಅದರಂತೆ ಇನ್ನೂ ಪ್ರಾಥಮಿಕ ಕ್ರೀಡಾ ವಿಭಾಗದಲ್ಲಿ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲ್ಲಿ ಬಾಲಕರು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಪ್ರಾಥಮಿಕ ಕ್ರೀಡಾ ವಿಭಾಗದ ಗುಂಪು ಆಟದಲ್ಲಿ ಕಬ್ಬಡಿಯಲ್ಲಿ ಕೂಡ ಪ್ರಥಮ ಸ್ಥಾನಗಳಿಸುವ ಮೂಲಕ ಬಾಲಕರು ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ.

Namma Challakere Local News
error: Content is protected !!