ಚಳ್ಳಕೆರೆ :
ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
ಅಂಗವಾಗಿ ನಗರದಲ್ಲಿ ಭಕ್ತರು ಬೈಕ್ ಯಾರ್ಲಿ ನಡೆಸಿ ಜಾಗೃತಿ ಮೂಡಿಸಿದರು.
ಚಳ್ಳಕೆರೆ ನಗರದ ನರಹರನಗರದಲ್ಲಿ ಫೆ.11,12 ರಂದು ನಡೆಯುವ ಶ್ರೀ ಕರಿಬಸವೇಶ್ವರ ವಿಗ್ರಹ ಪ್ರತಿಷ್ಠಾಪನೆಗೆ ಶ್ರದ್ಧಾ ಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಗುತ್ತದೆ ಎಂದು ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಸ್ವಾಮೀಜಿ ಹೇಳಿದರು.
ಬೈಕ್ ಯಾರ್ಲಿ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಿಂದ ಬಾಬು ಜನಜೀವನ್ ರಾಮ್ ವೃತ್ತ, ಕನಕ ವೃತ್ತ, ವಾಲ್ಮಿಕಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ನೆಹರು ವೃತ್ತದ ಮೂಲಕ ಬಳ್ಳಾರಿ ರಸ್ತೆಯ ಮೂಲಕ ಚಳ್ಳಕೆರಮ್ಮ ದೇವಸ್ಥಾನ, ಶ್ರೀ ವೀರಭದ್ರಪ್ಪಸ್ವಾಮಿ ದೇವಸ್ಥಾನ ದಿಂದ ಬೆಂಗಳೂರು ರಸ್ತೆಯ ಮೂಲಕ ಸ್ವಾಮಿ ಸನ್ನಿದಿಗೆ ನೂರಾರು ಭಕ್ತರು ಬೈಕ್ ಯಾರ್ಲಿ ಮೂಲಕ ತೆರಳಿದರು.


