ಚಳ್ಳಕೆರೆ :
ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ದರ್ಖಾಸ್ತು ಮಂಜೂರು ಜಮೀನುಗಳಿಗೆ ಸಂಬಂಧಿಸಿದಂತೆ ಕಾನೂನು ಬಾಹಿರ ಎನ್ ಓ ಸಿ ನೀಡಿದ್ದ ಅನ್ಯಾಯವನ್ನು ಖಂಡಿಸಿ ಬುದ್ಧ ವೇದಿಕೆ ಅಧ್ಯಕ್ಷರಾದ
ಪಿ.ದ್ಯಾಮಯ್ಯ ಹೋರಾಟ ನಡೆಸುತ್ತಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿದ ಜಮೀನಿಗೆ ಎನ್ಓಸಿ ನೀಡಬಾರದು ಎಂದು
ಕಳೆದ ಎರಡುವರೆ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.
ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಪ್ರಾಧಿಕಾರ, ಜಿಲ್ಲಾಧಿಕಾರಿಗಳವರಿಗೆ ನಿರ್ದೇಶನ ನೀಡಿದ್ದರೂ ಜಿಲ್ಲಾಧಿಕಾರಿಗಳು ಯಾವುದೇ ಕಠಿಣ ಕ್ರಮವನ್ನು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಜರಗಿಸದಿರುವುದು ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತಾಸಕ್ತಿಗೆ ವಿರೋಧಿ ಕ್ರಮವಾಗಿದೆ ಎನ್ನಲಾಗಿದೆ ಎಂದು ಆರೋಪಿಸಿದರು.
ಸರಕಾರ
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತಾಸಕ್ತಿಗೆ ಗಮನಹರಿಸದಿರುವುದು ಪರಿಶಿಷ್ಟ ಜಾತಿ ವರ್ಗಗಳ ವಿರೋಧಿ ಕ್ರಮವಾಗಿದೆ.
1950 ಜನವರಿ 26 ರ ಗಣರಾಜ್ಯೋತ್ಸವ ಕಾರ್ಯಕ್ರಮದಂದು ಸತ್ ಸಂಕಲ್ಪ ಮಾಡಿ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮನೆಗಳಿಗೂ ಈ ಅನ್ಯಾಯದ ಅರಿವಿನ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ಪಿ.ದ್ಯಾಮಯ್ಯ ಮನವಿ ನೀಡಿದ್ದಾರೆ.

