ಚಳ್ಳಕೆರೆ : ನೂತನ ವರ್ಷದ ಮಕರ ಸಂಕ್ರಾಂತಿ ಹಬ್ಬ ಎಲ್ಲಾರ ಮನ ಮನೆಗಳಲ್ಲಿ ನೆಮ್ಮದಿ ಸುಖಾ ಶಾಂತಿ ತರಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೆನೆ ಎಂದು ಜೆಡಿಎಸ್ ಮುಖಂಡ ಮಂಜುನಾಥ್ ಹೇಳಿದರು
ಅವರು ನಗರದ 18 ನೇ ವಾರ್ಡನ ಅಂಬೇಡ್ಕರ್ ನಗರದಲ್ಲಿ ಪ್ರತಿ ಮನೆಗೆ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು ಬೆಲ್ಲ ನೀಡಿ ಶುಭಾಶಯಗಳು ಕೋರಿ ಮಾತನಾಡಿದರು,
ಅಂಬೇಡ್ಕರ್ ನಗರ ಮೂಲತಃ ಸರ್ವ ಜನಾಂಗ ವಾಸಮಾಡುವಂತ ನಗರ ಕಡು ಬಡತನದಲ್ಲಿ ಇಲ್ಲಿನ ಜನರು ವಾಸಿಸುತ್ತಾರೆ ಆದರೆ ಮೂಲ ಭೂತಸೌಲಭ್ಯಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ದೊರಕಿಸಿಕೊಡಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಜೆಡಿಎಸ್ ಮುಖಂಡ ಭೀಮಣ್ಞ, ಮಧು, ಚಂದ್ರಣ್ಣ, ಶ್ರೀನಿವಾಸ್, ಆರ್ಪಿವುಲ್ಲಾ , ಓಬಳೇಶ್, ನಾಗೇಂದ್ರ, ತಿಪ್ಪೇಸ್ವಾಮಿ, ಇತರರು ಇದ್ದರು.

