“ಆಧ್ಯಾತ್ಮಿಕ ಜೀವನ ಕತ್ತಿ ಅಂಚಿನ ನಡಿಗೆ”:-ಶ್ರೀಮತಿ ಜಿ ಯಶೋಧಾ ಪ್ರಕಾಶ್. ಚಳ್ಳಕೆರೆ:-ಆಧ್ಯಾತ್ಮಿಕ ಜೀವನ ಎನ್ನುವುದು ಕತ್ತಿ ಅಂಚಿನ ನಡಿಗೆಯಾಗಿರುತ್ತದೆ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮುನ್ನಡೆಸುವ ಮಹಾಶಕ್ತಿ” ಎಂಬ ಅಧ್ಯಾಯವನ್ನು ಓದಿ ಅರ್ಥ ವಿವರಣೆ ನೀಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ, ಭಜನೆ ಮತ್ತು ಶ್ರೀಮದ್ ಭಗವದ್ಗೀತೆಯ ಧ್ಯಾನ ಶ್ಲೋಕಗಳ ಕಲಿಕಾ ಕಾರ್ಯಕ್ರಮ ನಡೆಯಿತು. ಸತ್ಸಂಗ ಸಭೆಯಲ್ಲಿ ಶಿಲ್ಪಾ ಮಹೇಶ್,ಅನಿತಾ ರಾಮಚಂದ್ರರೆಡ್ಡಿ, ಶಿಲ್ಪಾ ರಾಜು, ದ್ರಾಕ್ಷಾಯಣಿ,ಶೈಲಜಾ, ಸರಸ್ವತಿ ರಾಜು, ಯತೀಶ್ ಎಂ ಸಿದ್ದಾಪುರ , ಜಯಶೀಲಮ್ಮ , ಜಯಮ್ಮ , ರಶ್ಮಿ ರಮೇಶ್, ವಿಜಯಲಕ್ಷ್ಮೀ, ಶಾಂತಮ್ಮ , ಸುಧಾಮಣಿ, ಸೌಮ್ಯ ಪ್ರಸಾದ್, ಕವಿತಾ ಗುರುಮೂರ್ತಿ, ಮಂಗಳಾ ಭಾಗವಹಿಸಿದ್ದರು.

About The Author

Namma Challakere Local News
error: Content is protected !!