ಚಿತ್ರದುರ್ಗ: ಹೆತ್ತ ಮಗಳ ಮೇಲೆ
ಅತ್ಯಾಚಾರವೆಸಗಿದವನ ಬಂಧಿಸಿ
ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಅವನನ್ನು
ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಚಿತ್ರದುರ್ಗದ ವಿ ಪಾಳ್ಯದ
ಗ್ರಾಮಸ್ಥರು ಎಸ್ಪಿ ಕಚೇರಿ ಬಳಿಯಿಂದು ಪ್ರತಿಭಟನೆ ನಡೆಸಿದರು.
ಹೆತ್ತ ಮಗಳ ಮೇಲೆ ಅಮಾನುಷ ಕೃತ್ಯವೆಸಗಿರುವ ಪಾಪಿ ತಂದೆ
ಮಂಜುನಾಥ್ ನಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ
ಮೂಡಿದೆ. ಮಕ್ಕಳನ್ನು ಮನೆಯಲ್ಲಿ ಒಬ್ಬರನ್ನು ಬಿಟ್ಟು ಹೋಗಲು
ಭಯವಾಗುತ್ತಿದೆ. ಇದರಿಂದ ಅವರನ್ನು ಕೂಡಲೇ ಬಂಧಿಸಬೇಕು
ಎಂದು ಗ್ರಾಮದ ಮಹಿಳೆಯರು ಎಸ್ಪಿ ರಂಜಿತ್ ಕುಮಾರ್
ಬಂಡಾರುಗೆ ಮನವಿ ಮಾಡಿದರು.

