ಮೊಳಕಾಲ್ಕೂರು: ಕಿಂಗ್ ಪಿನ್ ಪತ್ತೆ ಹಚ್ಚಿ ಕಾನೂನು
ಕ್ರಮ ವಹಿಸಿ
ಮೊಳಕಾಲೂರು ತಾಲೂಕಿನಲ್ಲಿ ನಿರಂತರವಾಗಿ ಅನ್ನಭಾಗ್ಯ
ಯೋಜನೆಯ ಅಕ್ಕಿಯನ್ನು ಕದಿಯುತ್ತಿರುವ ಗ್ಯಾಂಗ್ನ ಕಿಂಗ್ಪಿನ್
ಸಹಿತ ತಂಡವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ
ಮೊಳಕಾಲ್ಕೂರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಿರೇನಹಳ್ಳಿ
ಗ್ರಾಮದ ಹೊರವಲಯದಲ್ಲಿ ನೂರಾರು ಅಕ್ಕಿ ಚೀಲಗಳನ್ನು
ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ ಕಡೆ ಅಕ್ಕಿ
ಸಾಗಿಸುವಾಗ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದು,
ಇದರ ಕಿಂಗ್ಪಿನ್ ಪತ್ತೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

