ಚಳ್ಳಕೆರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಡೆಯುವ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ, ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಮತ್ಸಮುದ್ರ ಇವರ ವತಿಯಿಂದ ಸುಮಾರು 50ಮಕ್ಕಳಿಗೆ ಕ್ರೀಡಾ ಸಮವಸ್ತ್ರವನ್ನು ನೀಡಿದ್ದಾರೆ,
ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಚಲ್ಮೇಶ್ ಮಾತನಾಡಿ, ಸರಕಾರಿ ಶಾಲಾ ಮಕ್ಕಳಿಗೆ ಕ್ರೀಡಾ ಮನೋಭಾವ ಹೊಂದಲು ಸಮವಸ್ತç ಅನಿವಾರ್ಯ ಎಂಬುದವನ್ನು ಮನಗಂಡು ಇಂದು ನಾವು ಸುಮಾರು 50 ಮಕ್ಕಳಿಗೆ ಕ್ರೀಡಾ ಸಮವಸ್ತç ನೀಡಿದ್ದೆವೆ, ಇದರಿಂದ ಮಕ್ಕಳು ಕ್ರೀಡೆಯಲ್ಲಿ ಸಂತೋಷದಿAದ ಪಾಲ್ಗೋಡಿರುವುದು ಸಂತಸ ತಂದಿದೆ, ಈಗೇ ಸಮಾಜ ಮುಖಿ ಕಾರ್ಯದಲ್ಲಿ ಸರಕಾರಿ ಮಕ್ಕಳ ಹಿತ ದೃಷ್ಠಿಯಿಂದ ಇಂದು ಹೈಕೋರ್ಟ್ ವಕೀಲರಾದ ಎಂ.ಸುಷಿಪಮ್ಮ, ಹಾಗೂ ಟಿ.ಶಿವಣ್ಣ ಇವರು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.

ಈದೇ ಸಂದರ್ಭದಲ್ಲಿ ಸದಸ್ಯ ಮಂಜುನಾಥ.ಸಿ., ಗೋವಿಂದ, ಮಂಜುನಾಥ, ಜೋಷಿ ಶಾಲಾ ಶಿಕ್ಷಕರಾದ ಆನಂದಪ್ಪ ಮುಖ್ಯೋಪಾಧ್ಯಾಯ ಸಹಶಿಕ್ಷಕ ರಮೇಶ್, ಸಿದ್ದೇಶ್, ಸತೀಶ್ ಹಾಗೂ ಎಸ್.ಡಿ.ಎಂ.ಸಿ ಸದಸ್ಯ ಮಂಜುನಾಥ, ಸಿರಿಯಣ್ಣ ರಾಮಾಂಜನೇಯ ಭಾಗವಹಿಸಿದ್ದರು.

About The Author

Namma Challakere Local News
error: Content is protected !!