ಅ. 27ಕ್ಕ ನಾಯಕ ಸಮುದಾಯದಿಂದ ನಾಯಕನಹಟ್ಟಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ. ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿಕೆ.

ನಾಯಕನಹಟ್ಟಿ:: ರಾಜ್ಯ ಸರ್ಕಾರ ಇತ್ತೀಚಿಗೆ ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಲು ಮುಂದಾಗಿರುವುದಕ್ಕೆ ಅಕ್ಟೋಬರ್ 27ರಂದು ನಾಯಕನಟ್ಟಿ ಹೋಬಳಿಯ ನಾಯಕ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದರು.

ಭಾನುವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಲ್ಲಿ ನಾಯಕ ಸಮುದಾಯದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ನಾಯಕ ಸಮುದಾಯದ ತಟ್ಟೆಗೆ ಕೈ ಹಾಕಲು ಮುಂದಾಗಿದೆ ಇರುವಂತಹ ಮೀಸಲಾತಿಯಲ್ಲಿ ನಮಗೆ ಸರಿಯಾದ ಉದ್ಯೋಗ ಅಧಿಕಾರ ಸಿಗದೇ ನಾವೇ ಕಂಗಲಾಗಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸುವುದು ಯಾವು ನ್ಯಾಯ ಆದರಿಂದ ಅಕ್ಟೋಬರ್ 27ರಂದು ನಾಯಕನಟ್ಟಿ ಪಟ್ಟಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ಹೋಬಳಿಯ ಸಮಸ್ತ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಸ್ ಟಿ ಬಸವರಾಜ್ ಪಟ್ಟಣ ಪಂಚಾಯತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ, ಎನ್ ಮಹಾಂತಣ್ಣ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಕನ್ನಯ್ಯ, ಜೆಡಿಎಸ್ ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ,ಜಿ.ಬಿ. ಮುದಿಯಪ್ಪ, ಏಜೆಂಟರು ಆರ್. ಪಾಲಯ್ಯ, ಎಸ್ ಟಿ. ಬೋರಸ್ವಾಮಿ, ರಾಮಸಾಗರ ಮಂಜಣ್ಣ, ಗುಂತಕೋಲ್ಮನಹಳ್ಳಿ ಜೆಸಿಬಿ ಎನ್ ತಿಪ್ಪೇಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ. ರಂಗಪ್ಪ, ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ, ಅಬ್ಬೇನಹಳ್ಳಿ ಓ ನಾಗರಾಜ್, ಬಸಣ್ಣ ಚೌಳಕೆರೆ,ರಾಮದುರ್ಗ ಡಿ.ಬಿ. ಬೋರಣ್ಣ, ಡಿ. ಟಿ. ಕಾಮರಾಜ್,ಜಾಗನೂರಹಟ್ಟಿ ಬಿ.ಟಿ. ಪ್ರಕಾಶ್, ವಕೀಲ ನಾಗೇಂದ್ರಪ್ಪ,ರೇಖಲಗೆರೆ ಎ.ಟಿ. ಅಶೋಕ. ಬಿಒಆರ್ ಓಬಣ್ಣ,ಗುಂತಕೋಲ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಬೂಟ್ ತಿಪ್ಪೇಸ್ವಾಮಿ, ನಲಗೇತನಹಟ್ಟಿ ನಿಂಗರಾಜ್, ರೇಖಲಗೆರೆ ತಿಪ್ಪೇಸ್ವಾಮಿ, ಇದ್ದರು.

About The Author

Namma Challakere Local News
error: Content is protected !!