ಚಳ್ಳಕೆರೆ : ಚಿತ್ರದುರ್ಗ: ಕೊಲೆಯ ರಹಸ್ಯ ಬಿಚ್ಚಿಟ್ಟ ಎಸ್ಪಿ ರಂಜಿತ್
ಕುಮಾರ್ ಬಂಡಾರು
ಚಿತ್ರದುರ್ಗದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ
ಎಸ್ಪಿರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದಂತೆ, ಇದೇ
6ರಂದು ಹಿರಿಯೂರಿನ ಕಣಜನಹಳ್ಳಿಯಲ್ಲಿ ಪತ್ನಿ ಸುನೀತಾಳನ್ನು
ಕೊಲೆ ಮಾಡಿ, ಪೆಟ್ರೋಲ್ ನಿಂದ ಸುಟ್ಟು ಗಾಯಗೊಂಡಿದ್ದ ಗಂಡ
ಲಿಂಗರಾಜ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ
ಗುಣಮುಖನಾದ ಮೇಲೆ ಆತನನ್ನು ಬಂಧಿಸಲಾಗುವುದು. ಮನೆಗೆ
ಕರೆದುಕೊಂಡು ಹೋಗುವ ನೆಪದಲ್ಲಿ ಖಾಲಿ ಜಾಗಕ್ಕೆ ಕರೆದೊಯ್ದು
ಪತ್ನಿ ಸುನೀತಾಳನ್ನು ಕೊಲೆ ಮಾಡಿದ್ದ ಎಂದು ತಿಳಿಸಿದರು.

