ಚಳ್ಳಕೆರೆ : ತಡ ರಾತ್ರಿ ಸುರಿದ ಭಾರೀ ಮಳೆಗೆ ಬಯಲು ಸೀಮೆ ಚಳ್ಳಕೆರೆ ತಾಲ್ಲೂಕು ತಲ್ಲಣಗೊಂಡಿದೆ.
ಹೌದು ಚಳ್ಳಕೆರೆ ತಾಲೂಕಿಗೆ ಎಂಟ್ರಿಕೊಟ್ಟ ಮಳೆರಾಯ ಸಂಜೆಯಿಂದ ಮುಂಜಾನೆಯ ವರೆಗೆ ಸುರಿದ ಮಳೆರಾಯನ ಅಬ್ಬರಕ್ಕೆ ನಗರದ ಜನತೆ ತಲ್ಲಣಗೊಂಡಿದ್ದಾರೆ.
ಇನ್ನೂ ಜನಜೀವನ ಅಸ್ತವ್ಯಸ್ತವಾಗಿ ತಗ್ಗು ಪ್ರದೇಶದ ಜನರು ಈಡೀ ರಾತ್ರಿ ತೊತ್ದ ಮನೆಯಲ್ಲಿ ಕತ್ತಲಲ್ಲಿ ಇರುವಂತಾಗಿತ್ತು.
ಅದರಂತೆ ಗಾಂಧಿನಗರದ ಡಬಲ್ ಟ್ಯಾಂಕ್ ಸಮೀಪ ಬೈಕ್ ಮೆಲೆ ವಿದ್ಯುತ್ ಕಂಬ ಮುರಿದು ಬಿದ್ದು ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.
ಈಗೇ ತಾಲೂಕಿನಲ್ಲಿ ಹಲವು ಕಡೆ ಜನ ಜೀವನ , ರೈತರ ಕೃಷಿ ಭೂಮಿ, ಹಾಗೂ ರೈಲ್ವೆ ಅಂಡರ್ ಪಾಸ್, ರಸ್ತೆ ಗುಂಡಿಗಳಿಂದ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.

