ಚಳ್ಳಕೆರೆ :
ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ, 600 ಕೊಳವೆ
ಬಾವಿಗಳಿಗೆ ವಿದ್ಯುತ್ ಪರಿಕರಗಳಿಲ್ಲ!
ಹೊಳಲ್ಕೆರೆಯಲ್ಲಿ ಮಾಜಿ ಸಚಿವ ಆಂಜನೇಯ ಕಾಲದಲ್ಲಿ
ಗಂಗಾಕಲ್ಯಾಣ ಯೋಜನೆಯಡಿ ಮಂಜೂರಾದ 600 ಕೊಳವೆ
ಬಾವಿಗಳಿಗೆ 3 ವರ್ಷವಾದರೂ ವಿದ್ಯುತ್ ಪರಿಕರಗಳು ಸಿಕ್ಕಿಲ್ಲ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮನಸ್ಸು
ಮಾಡಿದರೆ ಪರಿಕರಗಳನ್ನು ಒದಗಿಸಬಹುದು ಎಂದು ಫಲಾನುಭವಿ
ನಾಗರಾಜಪ್ಪ ಚಿತ್ರದುರ್ಗದಲ್ಲಿಂದು ತಿಳಿಸಿದರು. ಐದು ಬಾರಿ
ಅಧಿಕಾರಿಗಳು ಬದಲಾದರೂ ಪರಿಕರಗಳು ಮಾತ್ರ ದೊರೆತಿಲ್ಲ
ಎಂದು ಅವರು ಬೇಸರ ವ್ಯಕ್ತಪಡಿಸಿದರು.

