ಚಳ್ಳಕೆರೆ :
ಹೊಳಲ್ಕೆರೆ: ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ
ಫಲಾನುಭವಿಗಳು
ಹೊಳಲ್ಕೆರೆ ಕ್ಷೇತ್ರದಲ್ಲಿ 9 ವರ್ಷಗಳ ಹಿಂದೆ ಕೊರೆದಿರುವ ಕೊಳವೆ
ಬಾವಿಗಳಿಗೆ ಪರಿಕರಗಳನ್ನು ನೀಡದ ಹಿನ್ನೆಲೆಯಲ್ಲಿ, ಅಂಬೇಡ್ಕರ್
ಅಭಿವೃದ್ಧಿ ನಿಗಮದ ಮುಂದೆ ಇದೇ 16 ರಂದು ರೈತರೆಲ್ಲರೂ
ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಫಲಾನುಭವಿಗಳು ಎಚ್ಚರಿಕೆ
ನೀಡಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ರೈತರು,
ಪರಿಕರಗಳನ್ನು ನೀಡುವವರೆಗೂ ಉಪವಾಸ ಸತ್ಯಾಗ್ರಹದಿಂದ
ಹಿಂದೆ ಸರಿಯುವುದಿಲ್ಲ ಮತ್ತು ನಮಗೆ ನ್ಯಾಯ ಕೊಡಿಸಬೇಕು
ಎಂದು ಆಗ್ರಹಿಸಿದ್ದಾರೆ.

