ಚಳ್ಳಕೆರೆ :
ಹಿರಿಯೂರು: ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯ
ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಪ್ರದೇಶಕ್ಕೆ ಬೇಕಾಗುವ
ಗೊಬ್ಬರ, ಬಿತ್ತನೆ ಬೀಜದ ಅಂದಾಜು ಪಟ್ಟಿ ಸಿದ್ದುಪಡಿಸಲು
ವಿಫಲವಾಗಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ತಮ್ಮ
ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಇಂದು ಜೆಡಿಎಸ್ ಅಧ್ಯಕ್ಷ
ಹನುಮಂತರಾಯಪ್ಪ ಒತ್ತಾಯಿಸಿದರು.
ರೈತರಿಗೆ ಬೇಕಾಗಿರುವ
ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ
ಗೊಬ್ಬರದ ಕೃತಕ ಭಾವ ಸೃಷ್ಟಿಸಿದೆ. ಕಾಳ ಸಂತೆಯಲ್ಲಿ ಗೊಬ್ಬರ
ಮಾರಾಟ ಮಾಡಲು ಸಹಕರಿಸುತ್ತಿದೆ ಎಂದು ಆರೋಪಿಸಿದರು.

