ಚಳ್ಳಕೆರೆ: ಕಾಂಗ್ರೆಸ್ ಗೆ ಮೀಸಲಾತಿ ಕೊಡಬೇಕೆನ್ನುವ
ಅರಿವಿರಬೇಕಿತ್ತು
ಮಾದಿಗರು ಕಾಂಗ್ರೆಸ್ ನ್ನು ತಲೆ ಮೇಲೆ ಹೊತ್ತು ಮೆರೆಸಿದ್ದೇವೆ. ಆದರೆ
ನಮಗೆ ಒಳಮೀಸಲಾತಿಯನ್ನು ಕೊಡದೆ ಮಾದಿಗ ಸಮಾಜವನ್ನು
ಕಡೆಗಣಿಸಿದೆ. ಇನ್ನಾದರೂ ಒಳಮೀಸಲಾತಿ ಜಾರಿ ಮಾಡಬೇಕೆಂದು
ಚಳ್ಳಕೆರೆ ನಾಯಕನಹಟ್ಟಿ ಮಾದಿಗ ಮುಖಂಡ ಮಲ್ಲೇಶ್
ಆಗ್ರಹಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ
ಮಾತಾಡಿ, ಇಂದಿರಾ ಗಾಂಧಿ ಕಾಲದಿಂದಲೂ ಮಾದಿಗ ಸಮಾಜ
ಕಾಂಗ್ರೆಸ್ ಗೆ ನಿಷ್ಠೆಯಿಂದ ಇದೆ. ಆದರೆ ನಮಗೆ ಬೇಕಾದ
ಮೀಸಲಾತಿಯನ್ನು ಕೊಡಬೇಕೆಂಬ ಅರಿವು ಕಾಂಗ್ರೆಸ್ ಇರಬೇಕಿತ್ತು
ಎಂದು ಕಿಡಿ ಕಾರಿದರು.

