ಚಳ್ಳಕೆರೆ :
ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೆ ಕ್ಷಣ ಗಣನೆ
ಆರಂಭ
ಒಳಮೀಸಲಾತಿ ಜಾರಿಗೆ ಕ್ಷಣ ಗಣನೆ ಆರಂಭವಾಗಿದೆ. ಕಳೆದ
ಅಕ್ಟೋಬರ್ ನಲ್ಲಿ ನಾವು ಘೋಷಣೆ ಮಾಡಿದ್ವಿ, ಅದರಂತೆ,
ನಾಗಮೋಹನ್ ದಾಸ್ ಅವರನ್ನ ಒಳಮೀಸಲಾತಿ ಜಾರಿಗೆ ವರದಿ
ಕೇಳಿದ್ದು, ಇದೀಗ ಅವರು ಕೊಟ್ಟಿದ್ದಾರೆಂದು ಮಾಜಿ ಸಚಿವ
ಹೆಚ್. ಆಂಜನೇಯ ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿ, ಆಗಸ್ಟ್ ತಿಂಗಳಲ್ಲಿ ಯಾವುದೇ ಕಾರಣಕ್ಕೆ
ವಿಳಂಬವಾಗದೆ ಜಾರಿಯಾಗಲಿದೆ. ಆದರೆ ಕೆಲವರು ಸರ್ಕಾರ
ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ
ಎಂದರು.

