ಚಳ್ಳಕೆರೆ :
ಚಿತ್ರದುರ್ಗ: ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಗ್ರಾಪಂ
ಚಿತ್ರದುರ್ಗದ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ,
ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಒಂದಾಗಿ ದಲಿತ
ಕಾಲೋನಿಯಲ್ಲಿರುವ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆಂದು
ಹೇಳಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ದಲಿತರು
ಪ್ರತಿಭಟನೆ ನಡೆಸಿದರು.
ಶ್ರೀಮಂತರ ಅಡಿಕೆ ತೋಟಗಳಿಗೆ ನೀರು
ತೆಗೆಉಕೊಂಡು ಹೋಗಲು ನಮ್ಮ ಮನೆಗಳನ್ನು ನಾಶ ಪಡಿಸಲು
ಮುಂದಾಗಿದ್ದಾರೆ. ಬೇರೆಲ್ಲಾ ಸಮುದಾಯಗಳ ಮನೆಗಳಿದ್ದರೂ
ನಮ್ಮನ್ನೆ ಗುರಿಯಾಗಿಸಿಕೊಂಡಿದ್ದಾರೆಂದು ದೂರಿದರು.

