ಚಳ್ಳಕೆರೆ :
ಚಿತ್ರದುರ್ಗ: ಆರ್ ಸಿಬಿ ಅಭಿಮಾನಿಗಳಿಗೆ ಡಿವೈಎಸ್ಪಿ
ಲಾಠಿ ರುಚಿ
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್
ಸಿ ಬಿ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆ, ಚಿತ್ರದುರ್ಗದ
ಅಭಿಮಾನಿಗಳು ನಗರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಕುಣಿದು
ಕುಪ್ಪಳಿಸಿ ಸಂಭ್ರಮಿಸಿದರು. ಸಮಯ ತಡರಾತ್ರಿ 12. 30 ಆಗಿದ್ದು,
ವಾಹನಗಳು ಸಂಚರಿಸಲಾಗಿರಲಿಲ್ಲ. ಪೊಲೀಸರು ಮನವಿ ಗೂ ಸಹ
ಅಭಿಮಾನಿಗಳು ತೆರಳದಿದ್ದಾಗ, ಡಿವೈಎಸ್ಪಿ ದಿನಕರ್ ಫೀಲ್ಡ್ ಗಿಳಿದು
ಲಾಟಿ ಬೀಸಿದರು. ಲಾಠಿ ಏಟು ಬೀಳುತ್ತಿದ್ದಂತೆ ಅಭಿಮಾನಿಗಳು
ಕಾಲ್ಕಿತ್ತರು. ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು

