ಸರ್ಕಾರ ದುಡಿಯುವ ಕೈಗಳಿಗೆ ನೂರು ದಿನ ಕೆಲಸ ನೀಡಿ: ಅಬ್ಬೇನಹಳ್ಳಿ ಎ.ಪಿ.ರೇವಣ್ಣ,
ನಾಯಕನಹಟ್ಟಿ::
ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ನೆರೇಗಾ ವರದಾನವಾಗಿದೆ ಎಂದು ಅಬ್ಬೇನಹಳ್ಳಿ ಯುವ ಮುಖಂಡ ಎ.ಪಿ .ರೇವಣ್ಣ ಹೇಳಿದರು. ಗುರುವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮಪಂಚಾಯಿತಿ ನಡೆಯುತ್ತಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಕಾಮಗಾರಿ ನಡೆಯುತ್ತಿರುವ ಗೋಕಟ್ಟೆ ಸ್ಥಳಗಳಿಗೆ ಕೂಲಿಕಾರ್ಮಿಕರ ಕುರಿತು ಮಾತನಾಡಿದರು, ನರೇಗಾ ಕೂಲಿ ಜಾಬ್ ಕಾರ್ಡ್ ಇರುವ ಪ್ರತಿಯೊಬ್ಬ ಕೂಲಿ ಕಾರ್ಮಿಕರು ನರೇಗಾ ಯೋಜನೆಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿ ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಿದರು.
ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾಯಕ ಮಿತ್ರ ಸಿಬ್ಬಂದಿಗಳು ಎರಡು ಬಾರಿ ಜಿಪಿಎಸ್ ತಗೆದುಕೊಳ್ಳುವ ಬದಲು ಒಂದೇ ಬಾರಿ ಜೆಪಿಎಸ್ ತೆಗೆದುಕೊಂದರೆ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತದೆ, ಸರ್ಕಾರ ಕೂಲಿ ಕಾರ್ಮಿಕರಿಗೆ ಪ್ರತಿದಿನ 370 ರೂಗಳು ವೇತನ ನೀಡುತ್ತಿದ್ದು ಎಂದರು.
ಇದೇ ವೇಳೆ ಕೂಲಿ ಕಾರ್ಮಿಕ ಹರೀಶ ಮಾತನಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಬಡಜನರಿಗೆ ಅನುಕೂಲವಾಗುತ್ತದೆ, ಇದೇ ತರಹ ನೂರು ದಿನ ಸರ್ಕಾರ ಕೆಲಸ ಕೂಡಬೇಕು ಎಂದರು.
ಇನ್ನೂ ಕೂಲಿ ಕಾರ್ಮಿಕ ಗಂಗಮ್ಮ ಮಾತನಾಡಿದರು
ಈ ಸಂದರ್ಭದಲ್ಲಿ ಸಿ. ನಾಗರಾಜ್, ಎತೀಶ್,ಎನ್ ಮಹೇಶ್, ಜಿ. ಸುರೇಶ್, ಎಂ ತಿಪ್ಪೇಸ್ವಾಮಿ, ಕೃಷ್ಣಪ್ಪ, ಬೇತರಾಜು ಚಿನ್ನೋಬಯ್ಯ, ಮಂಜಣ್ಣ, ಏಕಾಂತಪ್ಪ, ಅಬ್ಬೇನಹಳ್ಳಿಗ್ರಾಮಸ್ಥರು ಇದ್ದರು.

