ಚಳ್ಳಕೆರೆ :
ಚಳ್ಳಕೆರೆ: ಬರದನಾಡಿನಲ್ಲಿ ಬಾಸುಮತಿ ಭತ್ತ ಬೆಳೆದ
ಪ್ರಗತಿಪರ ರೈತ
ಚಳ್ಳಕೆರೆ ತಾಲ್ಲೂಕಿನಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ,
ರಾಗಿ, ತೊಗರಿ ಮುಂತಾದ ಬೆಳೆ ಬೆಳೆಯಲಾಗುತ್ತಿದೆ. ಆದರೆ
ಇಲ್ಲೊಬ್ಬ ರೈತ ನೀರಾವರಿ ಸೌಲಭ್ಯದಲ್ಲಿ ಬಾಸುಮತಿ ಭತ್ತ
ಬೆಳೆದಿದ್ದಾನೆ.
ಚಿತ್ರಯ್ಯನ ಹಟ್ಟಿ ಪ್ರಗತಿಪರ ರೈತ ಲಕ್ಷ್ಮಣ್
ಪಾಳೇಗಾರ್ 2 ಎಕರೆ ಜಮೀನಿನಲ್ಲಿ ಬಾಸುಮತಿ ಭತ್ತ ಬೆಳೆದು
ಜಿಲ್ಲೆಯಲ್ಲಿ ಬಾಸುಮತಿ ಬೆಳೆದ ರೈತರಾಗಿದ್ದಾನೆ.
ಲಕ್ಷ್ಮಣ್
ಪಾಳೇಗಾರ್ ಬೆಳಗಾವಿಯಿಂದ30 ಕೆ. ಜಿ ಬಾಸುಮತಿ ಬೀಜ
ತಂದು 2 ಎಕರೆ ಪ್ರದೇಶದಲ್ಲಿ ಬಾಸುಮತಿ ಬೆಳೆ ಬೆಳೆದು ಯಶಸ್ಸು
ಕಂಡಿದ್ದಾನೆ.

