.ಏ.24. ಗುರುವಾರ ರಂದು ನಾಯಕನಹಟ್ಟಿ ಪಟ್ಟಣದ ನಾಡಕಛೇರಿ ಮುಂದೆ ಪ್ರತಿಭಟನೆ ಮಾಜಿ ಶಾಸಕ ನೇರಲಗುಂಟೆ ಎಸ್ ತಿಪ್ಪೇಸ್ವಾಮಿ.
ನಾಯಕನಹಟ್ಟಿ::ಏ. 20.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಹೋಬಳಿಯಲ್ಲಿ ಮತ್ತು ಹಿರೇಕೆರೆ ಕಾವಲುನಲ್ಲಿ ಕಂದಾಯ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಮಾಜಿ ಶಾಸಕ ನೇರಲಗುಂಟೆ ಎಸ್. ತಿಪ್ಪೇಸ್ವಾಮಿ ಗಂಭೀರವಾಗಿ ಆರೋಪಿಸಿದ್ದರು.
ಭಾನುವಾರ ಪಟ್ಟಣದಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು ಯಾರು ಜಮೀನು ಯಾರೋ ಹೆಸರಿಗೆ ವರ್ಗಾವಣೆ ಮಾಡಿ ಜಮೀನುಗಳನ್ನು ರಿಜಿಸ್ಟರ್ ಮಾಡಿಸಿದ್ದಾರೆ ಇದರಲ್ಲಿ ಕೆಲವು ಸ್ಥಳೀಯ ವ್ಯಕ್ತಿಗಳು ಸಹ ಕಂದಾಯ ಅಧಿಕಾರಿಗಳ ಜೊತೆ ಸೇರಿಕೊಂಡಿದ್ದಾರೆ ಅವರಿಂದ ಅಧಿಕಾರಿಗಳು ಇಷ್ಟೆಲ್ಲಾ ಜಮೀನುಗಳನ್ನು ವರ್ಗಾಯಿಸಿ ಜಮೀನುಗಳನ್ನು ಕಬ್ಬಲಿಸಿದ್ದಾರೆ ಮತ್ತೆ ಬೇರೆಯವರ ಜಮೀನುಗಳನ್ನು ಎಸ್ಸಿ ಎಸ್ಟಿ ಜಮೀನುಗಳನ್ನು ಬೇರೆಯವರಿಗೆ ಮಾರಾಟ ಮಾಡತಕ್ಕಂಥ ಕೆಲಸ ಮಾಡಿದ್ದಾರೆ ಆದ್ದರಿಂದ ನಾಯಕನಹಟ್ಟಿ ಹೋಬಳಿಯ ಜನರು ನನ್ನತ್ರ ಬಂದಿದ್ದರು ಆದ್ದರಿಂದ ನಾನು ಏಪ್ರಿಲ್ 24ರಂದು ಗುರುವಾರ ಪಟ್ಟಣದ ನಾಡಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ನೀವು ಬನ್ನಿ ಎಂದು ಅವಮಾನ ನೀಡಿದ್ದಾರೆ ನಾನು ಸಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಇದರ ಬಗ್ಗೆ ತಹಶೀಲ್ದಾರ್, ಎಸಿ, ಜಿಲ್ಲಾಧಿಕಾರಿಯವರು. ಗಮನಹರಿಸಬೇಕು ಇವರೆಲ್ಲ ಆಫೀಸ್ ನಲ್ಲಿ ಕುಳಿತುಕೊಂಡು ಕೆಲಸ ಆಗುತ್ತಾ ಇಲ್ಲವಾದರೆ ಇವರನ್ನೇ ನೇರವಾಗಿ ಹೊಣೆಮಾಡುವ ಕೆಲಸವಾಗುತ್ತದೆ ಎಂದರು.

