ಚಳ್ಳಕೆರೆ :
ಚಳ್ಳಕೆರೆ: ಇಲ್ಲಿನ ಜನರಿಗೆ ಮರದ ನೆರಳೆ ಆಸರೆ
ಚಳ್ಳಕೆರೆ ಕಾಟವ್ವನಹಳ್ಳಿ ಗೇಟ್ ಬಸ್ ನಿಲ್ದಾಣ ಶಿಥಿಲ ಗೊಂಡಿದ್ದು,
ಬಸ್ ನಿಲ್ದಾಣದ ಸುತ್ತಮುತ್ತ ಗಿಡ ಗಂಟೆಗಳು ಬೆಳೆದಿವೆ. ಇಲ್ಲಿಂದ
4-5 ಗ್ರಾಮಗಳಿಗೆ ಹೋಗೋ ಪ್ರಯಾಣಿಕರು ಮರದ ನೆರಳಿನಲ್ಲಿ
ನಿಲ್ಲಬೇಕು. ಚಳ್ಳಕೆರೆ ಚಿತ್ರದುರ್ಗ, ನಾಯಕನಹಟ್ಟಿಯಿಂದ
ಬಂದ ಪ್ರಯಾಣಿಕರು, ಕಾಟವ್ವನಹಳ್ಳಿ, ಭೀಮನಕೆರೆ, ವರವುಗೆ
ಹೋಗಬೇಕೆಂದರೆ ಇಲ್ಲಿ ನಿಂತು ಕಾಯಬೇಕು.
ನಿಗಧಿತ
ಸಮಯದಲ್ಲಿ ಬಸ್ ಬರದಿದ್ದಾಗ ವಿದ್ಯಾರ್ಥಿಗಳು, ಗರ್ಭಿಣಿಯರು
ಮರದ ನೆರಳಲ್ಲಿ ನಿಂತು ಕಾಯಬೇಕಾಗುತ್ತದೆ ಎಂದು ಗ್ರಾಮಸ್ಥರು
ಹೇಳುತ್ತಾರೆ.

