ಚಳ್ಳಕೆರೆ :
ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಮದ್ಯ
ಮಾರಾಟಗಾರರ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಿತ್ರದುರ್ಗ
ಜಿಲ್ಲಾ ಮದ್ಯ ಮಾರಾಟಗಾರರ ಸಂಘದವರು ಜಿಲ್ಲಾಧಿಕಾರಿಗಳ
ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು.
ಬಾರ್ ಗಳಲ್ಲಿ ಚಿಲ್ಲರೆ
ಮದ್ಯ ಮಾರಾಟದ ಮೇಲೆ ಕನಿಷ್ಟ ಶೇಕಡಾ 20ರಷ್ಟು ಲಾಭಾಂಶ
ನೀಡಬೇಕು. ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು.
ಸನ್ನದು ಶುಲ್ಕವನ್ನು ಹೆಚ್ಚಿಸಬಾರದು, ಅಬಕಾರಿ ಕಾಯ್ದೆ ಕಲಂ 29
ನ್ನು ಪುನರ್ ವಿಮರ್ಶಿಸಬೇಕು. ಎಂಎಸ್ ಐ ಎಲ್ ಸನ್ನದುಗಳ
ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳಬೇಕೆಂದು
ಒತ್ತಾಯಿಸಿದರು.

