ಚಳ್ಳಕೆರೆ :
ಮೊಳಕಾಲ್ಕೂರು: ಬಾಲಕ ಸತ್ತ10 ವರ್ಷ ನಂತರ ಹೊರ
ಬಿದ್ದ ಐತಿಹಾಸಿಕ ತೀರ್ಪು
ವಿದ್ಯುತ್ ಕಂಬದ ವಯರ್ ತಗುಲಿ ಬಾಲಕನ ಮೃತಪಟ್ಟ 10
ವರ್ಷಗಳ ನಂತರ, ಮೊಳಕಾಲ್ಕೂರು ಜೆಎಂ ಎಫ್ ಸಿ
ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದೆ. 2015ರಲ್ಲಿ
ಭೋವಿ ಕಾಲೋನಿ ಹಳೆ ಪಂಪ್ ಹೌಸ್ ಹತ್ತಿರ ಆಡಲು
ಹೋಗಿದ್ದಾಗ, ವಿದ್ಯುತ್ ಕಂಬದಿಂದ ಹೊರಗಿದ್ದ ತಂತಿ ತಗುಲಿ
ಬಾಲಕ ಕಿರಣ್ ಮೃತಪಟ್ಟಿದ್ದ, ಮೊಳಕಾಲ್ಕೂರು ಪೊಲೀಸ್
ಠಾಣೆಯಲ್ಲಿ ಬೆಸ್ಕಾಂ ನ ಎಇಇ, ಮ್ಯಾಕಾನಿಕ್ ಇನ್ನೊಬ್ಬನ
ಮೇಲೆವಪ್ರಕರಣ ದಾಖಲಾಗಿತ್ತು. ಇಂದು ವಾದ ವಿವಾದ ಆಲಿಸಿ
ನ್ಯಾಯಾಲಯವಿಂದು 2 ವರ್ಷ ಜೈಲು ಹಾಗೂ 10 ಸಾವಿರ ದಂಡ
ವಿಧಿಸಿದೆ.

