“ಶ್ರೀಶಾರದಾಶ್ರಮದ ಮಕ್ಕಳಿಂದ ಭಗವದ್ಗೀತೆಯ ಪಠಣ”.
ಚಳ್ಳಕೆರೆ:-ಆಧ್ಯಾತ್ಮಿಕ ನಗರಿ ಚಳ್ಳಕೆರೆಯ ಶಿವನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರು ತರಬೇತಿ ನೀಡಿರುವ ಮಕ್ಕಳು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು, ಭಜನೆಗಳನ್ನು ಹಾಗೂ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳನ್ನು ಹೇಳಿದರು.
ಈ ಶ್ಲೋಕ ಪಠಣ ಕಾರ್ಯಕ್ರಮದಲ್ಲಿ ಯಶೋಧಾ ಪ್ರಕಾಶ್,ವಿಕ್ರಮ್, ನಿಖಿಲೇಶ್, ಶ್ರೇಯಸ್ಸು, ಯಶಸ್ಸು,ದವನ್, ಮನ್ವಿತ್,ಮೋಕ್ಷಿತ್, ಕಾರ್ತಿಕ,ಮನಸಿರಿ, ಹರ್ಷಿತ,ಪ್ರತೀಕ್ಷಾ,ವಿನತಿ, ಯುಕ್ತ,ಯಶಸ್ವಿ,ಶೈಲಜ, ಸಂಗೀತ, ಕೃಷ್ಣವೇಣಿ, ರಶ್ಮಿ ವಸಂತ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

