ಚಳ್ಳಕೆರೆ : ಲೋಕಕಲ್ಯಾಣ ಅರ್ಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ ಡಿ.ಉಪಾರೆಡ್ಡಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿರುವ ಶ್ರೀ ಗುರು ವೀರಣ್ಣ ಸ್ವಾಮಿಗಳ ನೇತೃತ್ವದಲ್ಲಿ , ಶ್ರೀ ಈರಣ್ಣ ಶ್ರೀನಿಜಲಿಂಗಪ್ಪ ಇವರ ಮಾರ್ಗದರ್ಶನದೊಂದಿಗೆ ಹಲವು ಭಕ್ತಾಧಿಗಳು, ಪಾದಯಾತ್ರೆ ಮಾಡುವ ಮೂಲಕ ನಾಡಿನ ಒಳಿತಿಗೆ ದಾರ್ಶನಿಕರಾಗಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನ ಪಾಂಡವಪುರ ಯಾಂತ್ರಿಕರು ಹಾಗೂ ಚಿತ್ರದುರ್ಗದಿಂದ ಪಾದಯಾತ್ರೆ ಭಕ್ತಾದಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಫೆ.17 ರಿಂದ 25 ರವರೆಗೆ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ವನ್ನು ತಲುಪಲಿದ್ದೆವೆ ಎಂದು ಶ್ರೀ ಗುರು ವೀರಣ್ಣ ಸ್ವಾಮಿಗಳು ತಿಳಿಸಿದ್ದಾರೆ.

