ಚಳ್ಳಕೆರೆ :
ಚಿತ್ರದುರ್ಗ: ಸ್ಮಶಾನ ಭೂಮಿಯನ್ನು ಬೇರೆ
ಸಮುದಾಯಕ್ಕೆ ನೀಡಬೇಡಿ
ಚಿತ್ರದುರ್ಗದ ಕಲಾ ಕಾಲೇಜಿನ ಹಿಂಭಾಗದಲ್ಲಿರುವ ಸ್ಮಶಾನ
ಭೂಮಿಯನ್ನು ಬೇರೆ ಸುಮುದಾಯದವರಿಗೆ ಕೊಡಲು ಮಾಡುವ
ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಮಾಜಿ ಸಚಿವ ಹೆಚ್.
ಆಂಜನೇಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ
ಮನವಿ ನೀಡುವ ಮೂಲಕ ಇಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ
ಕಚೇರಿ ಬಳಿ ಎಸ್ಸಿ ಎಸ್ಟಿ ಸಮುದಾಯದ ಸ್ಮಶಾನ ಭೂಮಿಯಲ್ಲಿ
ಬೇರೆ ಸಮುದಾಯದವರಿಗೆ ಕೊಡಬಾರದು, ನಮ್ಮ ಜನರ ಅಂತ್ಯ
ಸಂಸ್ಕಾರಕ್ಕೆ ಜಾಗ ಸಾಲುತ್ತಿಲ್ಲ. ಕೂಡಲೇ ಆ ಪ್ರಕ್ರಿಯೆಯನ್ನು
ನಿಲ್ಲಿಸಬೇಕೆಂದರು.

