ಚಳ್ಳಕೆರೆ :
ಚಿತ್ರದುರ್ಗ: ಶ್ರೀಗಳು ಗೂಂಡಾಗಳನ್ನು ಗಲಾಟೆಗೆ
ಕಳುಹಿಸಿದ್ದರು
ಚಿತ್ರದುರ್ಗದಲ್ಲಿ ಸಂವಿಧಾನದ ಪರ ವಿರೋಧದ ಬಗ್ಗೆ ಕಳೆದ
ಡಿಸೆಂಬರ್ ನಲ್ಲಿ ಸಂವಾದಕ್ಕೆ ಕರೆದರೆ, ರೌಡಿಗಳ ಬಿಟ್ಟು
ಮಾದಾರ ಚನ್ನಯ್ಯ ಶ್ರೀಗಳು ಗಲಾಟೆ ಮಾಡಿಸಿದ್ದರು ಎಂದು
ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ್ ಆರೋಪಿಸಿದರು.
ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಸ್ವಾಮೀಜಿಯವರನ್ನಾಗಲಿ ಅಥವ ದಲಿತ ಮುಖಂಡರುಗಳನ್ನಾಗಲಿ
ಸಂವಾದಕ್ಕೆ ಕರೆದಿದ್ದು, ಗಲಾಟೆಗೆ ಕರೆದಿರಲಿಲ್ಲ. ಗಲಾಟೆ ಮಾಡಲು
ಗಡಿಪಾರಾದವರು, ಕುಡುಕರು, ಗೂಂಡಾಗಳು ಬಂದಿದ್ದರು ಎಂದು
ಕಿಡಿಕಾರಿದರು.

