ಪರಿಸರ ಅಭಿವೃದ್ಧಿಗೆ ಡಿ.ಎಮ್.ಎಫ್ ಹಾಗೂ ನಗರೋತ್ಥಾನದಡಿ ಅನುದಾನ

ಚಿತ್ರದುರ್ಗ ಜೂ.05: ಕಳೆದ ವರ್ಷ ಶಾಸಕರಿಗೆ ಬರುವ ಡಿ.ಎಮ್.ಎಫ್(ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ) ಅಡಿ ಸಾಮಾಜಿಕ ಅರಣ್ಯ ಹಾಗೂ ವಲಯ ಅರಣ್ಯ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈ ಬಾರಿ ನಗರೋತ್ಥಾನ ಅನುದಾನದಲ್ಲಿ ನಗರದಲ್ಲಿ ಗಿಡ ನೆಡಲು, ಉದ್ಯಾನವನ ಅಭಿವೃದ್ಧಿಗಾಗಿ 4 ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಜೋಗಿಮಟ್ಟಿ ( ಆಡುಮಲ್ಲೇಶ್ವರ) ಚೆಕ್ ಫೊಸ್ಟ್ ಬಳಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವಿದ್ಯಾವಿಕಾಸ ಸಂಸ್ಥೆ, ರೆಡ್ ಕ್ರಾಸ್, ನೆಹರು ಯುವಕೇಂದ್ರ, ರೋಟರಿ ಕ್ಲಬ್ ಜೋಗಿಮಟ್ಟಿ, ಜಿಲ್ಲಾ ಐಟಿ ಡಿಲರ್ಸ್ ಅಸೋಸಿಯೇಷನ್ ಇವರುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ-2022 ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಹಳೆಯ ಮರಗಳನ್ನು ತೆರವುಗೊಳಿಸಲಾಯಿತು. ಇದು ಸಾರ್ವಜನಿಕರಷ್ಟೇ ಅಲ್ಲ, ನನಗೂ ಬೇಸರದ ಸಂಗತಿಯಾಗಿತ್ತು. ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆ ಆಧರಿಸಿ, ಸುಗಮ ಸಂಚಾರ ಕಲ್ಪಿಸುವ ದೃಷ್ಟಿಯಿಂದ ಅನಿವಾರ್ಯ ಮರಗಳನ್ನು ತೆರವುಗೊಳಿಸಲಾಯಿತು.
ತರೆವು ಗೊಳಿಸಿದ ಮರಗಳಿಗೆ ಪ್ರತಿಯಾಗಿ ಗಿಡಗಳನ್ನು ಬೆಳಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ವಿಷೇಶ ಯೋಜನೆ ರೂಪಿಸಲಾಗಿದೆ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಗಿಡ ನೆಡಲು ಅಗತ್ಯ ಜಾಗವನ್ನು ಬಿಡುವಂತೆ ಲೋಕೋಪಯೋಗಿ ಇಲಾಖೆ ನಗರ ಸಭೆ‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಗರೋತ್ಥಾನ ಅನುದಾನದಲ್ಲಿ ಖಾಸಗಿ ಲೇ ಔಟ್‌ಗಳಲ್ಲೂ ಗಿಡ ಮರಗಳನ್ನು ಬೆಳಸಲಾಗುವುದು. ಪರಿಸರ ಕುರಿತು ಸಾರ್ವಜನಿಕರಲ್ಲಿ ಕಾಳಜಿ ಅಗತ್ಯ. ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಜೊತೆ ಜನರು ಕೈಜೋಡಿಸಬೇಕು. ಸರ್ಕಾರ ಪ್ರತಿ ವರ್ಷ ಅರಣ್ಯೀಕರಣಕ್ಕೆ ಖರ್ಚು ಮಾಡುವ ಹಣದಲ್ಲಿ, ಅರ್ಧದಷ್ಟು ಗಿಡಮರಗಳು ಬೆಳೆದಿದ್ದರು, ದೇಶದಲ್ಲಿ ಅಗತ್ಯ ಪ್ರಮಾಣದ ಅರಣ್ಯ ಇರುತ್ತಿತ್ತು. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ವಿಶ್ವ ಸಂಸ್ಥೆ ಇದರ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ನೈಸರ್ಗಿಕ ವಿಕೋಪ, ಅಸಾಧರಣ ಮಳೆ, ಬಿಸಿಲು ಜಾಗತಿಕ ತಾಪಮಾನದ ಪರಿಣಾಮ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಹಲವು ಜಾತಿಯ ಗಿಡದ ಬೀಜಗಳನ್ನು ಊಳುವ ಕಾರ್ಯಕ್ರಮಕ್ಕೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು‌. ವಿದ್ಯಾರ್ಥಿಗಳು ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರ ಪ್ರದೇಶದಲ್ಲಿ ಬೀಜಗಳನ್ನು ಉಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸತ್ಯನಾರಾಯಣ, ಪ್ರಾದೇಶಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ, ವಲಯ ಅರಣ್ಯಾಧಿಕಾರಿ ಜಿ.ಎಸ್. ಸಂದೀಪ್ ನಾಯಕ, , ಉಪವಲಯ ಅರಣ್ಯಾಧಿಕಾರಿ ಟಿ.ಬಿ. ರುದ್ರಮುನಿ,ಸಾಮಾಜಿಕ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ನಾಯ್ಕ್ಸಮಾಜಿಕ ವಲಯ ಅರಣ್ಯಾಧಿಕಾರಿ ಭರತ್ ರಾಜ್, ನೆಹರು ಯುವಕೇಂದ್ರದ ಜಿಲ್ಲಾ ಯುವ ಜನ ಅಧಿಕಾರಿ ಎನ್.ಸುಹಾಸ್, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಪ್ರಾದೇಶಿಕ ಹಾಗೂ ಸಾಮಾಜಿಕ ವಲಯದ ಸಿಬ್ಬಂದಿ ಹಾಜರಿದ್ದರು.

Namma Challakere Local News
error: Content is protected !!