ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಹಳ್ಳಕೊಳ್ಳಲು ಭರ್ತಿ

ಚಳ್ಳಕೆರೆ
ತಾಲೂಕೀನ ವಿವಿಧ ಗ್ರಾಮಗಳಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ. ಚೆಕ್ ಡ್ಯಾಂಗಳು ಮೈ ತುಂಬಿ ಹರಿಯುತ್ತಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಬಡವರ ಬಾದಾಮಿ ಶೇಂಗಾ ಬೆಳೆ ಮಳೆಯಿಲ್ಲದೆ ಒಣಗಲು ಪ್ರಾರಂಭಿಸಿದ್ದವು ಈಗ ಸಾಯುವ ಶೇಂಗಾ ಬೆಳೆಗೆ ಗ್ಲುಕೋಸ್ ಬಾಟಲಿ ಹಾಕಿದಂತಾಗಿದೆ ,ಇದೇ ಮಳೆ ಒಂದು ತಿಂಗಳು ಮುಂಚಿತವಾಗಿ ಬಂದಿದ್ದರೆ ರೈತರಿಗೆ ಶೇಂಗಾ ಬೆಳೆ ಬಂಪರ್ ಬೆಳೆಯಾಗುತ್ತಿದ್ದು ತಡವಾಗಿ ಬಂದರೂ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ವೃದ್ಧಿ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿದಂತಾಗುತ್ತದೆ ಎಂಬುದು ಅನ್ನದಾತರ ಅನಿಸಿಕೆ ಯಾಗಿದೆ.

ಉತ್ತಮ ಮಳೆಯಿಂದ ಚಳ್ಳಕೆರೆ ಸೇರಿದಂತೆ ಗಂಜಿಗುಂಟೆ. ಗೋಪನಹಳ್ಳಿ ಗರಣಿಹಳ್ಳ ಮೈತುಂಬಿ ಹರಿದು ದೊಡ್ಡೇರಿ ಹಾಗೂ ರಾಣಿಕೆರೆಯತ್ತ ಹರಿಯುತ್ತಿದೆ. ಎನ್.ದೇವರಹಳ್ಳಿ ಗ್ರಾಮದ ಸುತ್ತ ಮುತ್ತಲೂ ಉತ್ತಮ‌ಮಳೆಯಿಂದ ಹಳ್ಳ ಚೆಕ್ ಡ್ಯಾಂ ತುಂಬಿ ಹರಿದರೆ ಗಂಜಿಗುಂಟೆ ಗ್ರಾಮದ ಹೊಸಟ್ಟಿಯಲ್ಲಿ ಮನೆಗೆಳಿಗೆ ನೀರು ನುಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Namma Challakere Local News
error: Content is protected !!