ಚಳ್ಳಕೆರೆ :

ಮಾಂಗಲ್ಯ ಸರ ದೋಚಿದ್ದವನ ಬಂಧಿಸಿದ ಪೊಲೀಸರು

ಹೊಳಲ್ಕೆರೆಯ ಆರ್ ನುಲೇನೂರು ಗ್ರಾಮದ ಅಡಿಕೆ
ತೋಟದಲ್ಲಿ ಸಾಕಮ್ಮ ಎನ್ನುವ ಮಹಿಳೆ ಕತ್ತಿನಲ್ಲಿದ್ದ 50 ಗ್ರಾಂ
ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ
ಕಳ್ಳನನ್ನು ಬಂಧಿಸಿ ಅವನಿಂದ ಮಾಂಗಲ್ಯ ಸರವನ್ನು ಹೊಳಲ್ಕೆರೆ
ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳನನ್ನು ಕಡೂರು
ತಾಲೂಕಿನ ಕಾನಗೊಂಡನಹಳ್ಳಿ ವಡ್ಡರಹಟ್ಟಿಯ ಸುರೇಶ ಎಂದು
ಗುರುತಿಸಲಾಗಿದೆ.

ಇವನನ್ನು ಶಿರಾದ ಮದ್ದಾಕನಹಳ್ಳಿ ಗ್ರಾಮದಲ್ಲಿ
ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Namma Challakere Local News
error: Content is protected !!