ಚಳ್ಳಕೆರೆ :

ಎತ್ತಿನಹೊಳೆಯಲ್ಲಿ ಮುಳುಗಿದ ಭದ್ರಾ ಮೇಲ್ದಂಡೆ
ಯೋಜನೆ

ಸರ್ಕಾರದ ಮಹತ್ವಕಾಂಕ್ಷೆ ಬಯಲು ಸೀಮೆಗೆ ನೀರು ಹರಿಸುವ,
ಭದ್ರ ಮೇಲ್ದಂಡೆ ಯೋಜನೆ ಕಳೆದ 15 ವರ್ಷಗಳಿಂದ ಗ್ರಹಣ
ಹಿಡಿದು ಕುಳಿತಿದೆ.

ಭದ್ರ ಮೇಲ್ದಂಡೆ ಪ್ಯಾಕೇಜ್ ಒಂದರ 12 ಕಿ. ಮೀ
ಮಾಡಲು 15 ವರ್ಷವಾದರೂ ಸಾಧ್ಯವಾಗಿಲ್ಲ ಎಂದು ಹಿರಿಯೂರಿನ
ರೈತ ಮುಖಂಡ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಹಿರಿಯೂರಿನಲ್ಲಿ ಮಾತಾಡಿದರು. ಇಂಜಿನಿಯರ್ ಗಳು
ಕೆಲಸ ಮಾಡದೆ, ಬಯಲು ಸೀಮೆಯ 2 ಲಕ್ಷ ಎಕರೆಗೆ ನೀರು
ಹರಿಸುವುದಾಗಿ ಹೇಳುತ್ತಾ ಬಂದಿದ್ದಾರೆಂದು ಅಸಮಾಧಾನ ಹೊರ
ಹಾಕಿದರು.

Namma Challakere Local News
error: Content is protected !!