ಚಳ್ಳಕೆರೆ: ಕಳೆದ ಹಲವು ವರ್ಷಗಳಿಂದ ಚಳ್ಳಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಖಾಲಿಯಾಗಿದ್ದು ಅಭಿವೃದ್ಧಿ ಮರಿಚೀಕೆಯಾಗಿತ್ತು ಆದರೆ ಕಳೆದ ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗಧಿ ಪಡಿಸಿ ಸರಕಾರ ಆದೇಶ ಹೊರಹಾಕಿತ್ತು‌ ಅದರಂತೆ ಚಳ್ಳಕೆರೆ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಗೆ ಮೀಸಲಾಗಿದ್ಸು ಉಪಾಧ್ಯಕ್ಷ ಸ್ಥಾನ ಎಸ್‌ಟಿ‌‌ ಮಹಿಳೆಗೆ ಮೀಸಲಾಗಿ ಆದೇಶ ಹೊರ ಹಾಕಲಾಗಿತ್ತು.

ಆದರೆ ನಗರಸಭೆ ಯಲ್ಲಿ ಏಕೈಕ‌ ಮಹಿಳೆ ಬಿಸಿಎಂಬಿ ಯಲ್ಲಿ ಇರುವುದರಿಂದ ಬಹುತೇಕ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಗುವ‌ ಸಾಧ್ಯತೆ ಇತ್ತು. ಆದರೆ 21 ನೇ ವಾರ್ಡ್ ನ ಸಾಮಾನ್ಯ ಮಹಿಳೆ ಕೋಟದಡಿಯಲ್ಲಿ ಸ್ಪರ್ಧಿಸಿ ಅಧಿಕಾರದ ಗದ್ದುಗೆ‌ ಹೇರಿದ್ದರು ಆದರೆ ಈಗ ಚುನಾವಣಾ ಉದ್ದೇಶ ಕ್ಕಾಗಿ ಬಿಸಿಎಂಬಿ ಪ್ರಮಾಣ ಪತ್ರ ನೀಡದಿರಲು ಬಿಜೆಪಿ ಹಾಗೂ ಜೆಡಿಎಸ್ ನಾಯಕೆರು ತಹಶಿಲ್ದಾರ್ ಗೆ‌ ಮನವಿ‌‌ ಸಲ್ಲಿಸಿದ್ದಾರೆ

ನಗರಸಭೆಯ 21ನೇ ವಾರ್ಡ್‌ ನ ಸದಸ್ಯೆ ಆಗಿರುವ
ಸಾವಿತ್ರಮ್ಮರವರಿಗೆ ಬಿ ಸಿ ಎಂ ಬಿಗೆ ಸೇರಿದ ಪ್ರಮಾಣ ಪತ್ರವನ್ನು
ಚುನಾವಣಾ ಉದ್ದೇಶಕ್ಕಾಗಿ ನೀಡದಿರಲು ಒತ್ತಾಯಿಸಿ ಜೆಡಿಎಸ್ ಹಾಗೂ
ಬಿಜೆಪಿ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ ತಿಪ್ಪೇಸ್ವಾಮಿ
ಚಳ್ಳಕೆರೆ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಬಿ ಸಿ ಎಂ ಬಿ ಗೆ ಅಧ್ಯಕ್ಷ ಸ್ಥಾನ
ಮೀಸಲಾಗಿದ್ದು ಎಸ್ ಟಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ನಿಗದಿಪಡಿಸಿ
ಸರ್ಕಾರ ಆದೇಶ ಹೊರಡಿಸಿದೆ ಆದರೆ ನಗರಸಭಾ ಸದಸ್ಯೆ ಸಾವಿತ್ರಮ್ಮ
ಸಾಮಾನ್ಯ ಮಹಿಳೆ ಕೋಟದ ಅಡಿಯಲ್ಲಿ ನಗರಸಭೆಗೆ ಸ್ಪರ್ಧಿಸಿ
ಜಯಗಳಿಸಿದ್ದು ಈಗ ಬಿಸಿಎಂ ಬಿ ಕೋಟಾದ ಅಡಿಯಲ್ಲಿ ನಗರಸಭೆ
ಅಧ್ಯಕ್ಷರಾಗಲು ಹೊರಟಿದ್ದಾರೆ ಇದು ಕಾನೂನು ಬಾಹಿರವಾಗಿದ್ದು
ಪ್ರಮಾಣ ಪತ್ರವನ್ನು ನೀಡಬಾರದು ಕಾನೂನಾತ್ಮಕವಾಗಿ ದಾಖಲೆಗಳು
ಸರಿ ಇದ್ದರೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಬೇಕು
ರಾಜಕೀಯ ಒತ್ತಡಕ್ಕೆ ಒಳಗಾಗಿ ಪ್ರಮಾಣಪತ್ರ ನೀಡಿದಲ್ಲಿ ಕಾನೂನು
ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು
ನಗರಸಭಾ ಸದಸ್ಯ ವಿ ವೈ ಪ್ರಮೋದ್ ಮಾತನಾಡಿ ನಗರಸಭೆ ಅಧ್ಯಕ್ಷ
ಸ್ಥಾನವು ಬಿಸಿಎಂ ಬಿ ಸ್ಥಾನಕ್ಕೆ ನಿಗದಿಪಡಿಸಿದ್ದು ಅಧಿಕಾರಿಗಳು ಸರಿಯಾದ
ರೀತಿಯಲ್ಲಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಬೇಕು
ರಾಜಕೀಯದ ಒತ್ತಡಗಳಿಗೆ ಒಳಗಾಗಿ ಕಾರ್ಯನಿರ್ವಹಿಸಿದ್ದಲ್ಲಿ
ನ್ಯಾಯಲಯದ ಮೂಲಕ ಕಾನೂನು ಹೋರಾಟ ನಡೆಸಲಾಗುವುದು
ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ
ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮನವಿ ಪತ್ರವನ್ನು ತಹಶಿಲ್ದಾರ ಅನುಪಸ್ಥಿತಿಯಲ್ಲಿ ಶಿರಸ್ತೆದಾರ ಗಿರೀಶ್
ಮನವಿ ಸ್ವೀಕರಿಸಿದರು
ಈ ಸಂದರ್ಭದಲ್ಲಿ ತಾಲೂಕು ಜೆ.ಡಿ.ಎಸ್ ಅಧ್ಯಕ್ಷರಾದ ಪಿ.ತಿಪೇಸ್ವಾಮಿ (
ಪಿ.ಟಿ ) ನಗರಸಭಾ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಸದಸ್ಯರಾದ
ಸಿ.ಶ್ರೀನಿವಾಸ್, ಸಿ.ಎಂ ವಿಶುಕುಮಾರ್, ವಿ.ವೈಪ್ರಮೋದ್,
ಜಿ.ಗೋವಿಂದ, ನಾಗಮಣಿ ರಮೇಶ್‌, ತಿಪ್ಪಮ್ಮಟಿ ಕವಿತಾ ನಾಯಕಿ, ಡಿ
ನಿರ್ಮಲ ಪ್ರಸನ್ನ ಬಿ.ಜೆ.ಪಿ ಸದಸ್ಯರಾದ ಎಸ್.ಜಯಣ್ಣ ಟಿ
ಶಿವಕುಮಾರ್, ಪಾಲಮ್ಮ ಹಾಗೂ ಸಾಕಮ್ಮ ಉಪಸ್ಥಿತರಿದ್ದರು.

Namma Challakere Local News
error: Content is protected !!