ಚಳ್ಳಕೆರೆ ನ್ಯೂಸ್ :
ಅಚ್ಚುಕಟ್ಟು ಪ್ರದೇಶಕ್ಕೆ ಹರಿಯಲಿದೆ ನೀರು
ಬರಗಾಲದ ಹಿನ್ನೆಲೆಯಲ್ಲಿ ತೋಟಗಾರಿಕೆ ಹಾಗು ಕೃಷಿ ಬೆಳೆಗಳಿಗೆ
ನೀರಿನ ಅವಶ್ಯಕತೆ ಇದ್ದು, ಮೇ 10 ರಿಂದ ಹಿರಿಯೂರಿನ
ವಿವಿಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ, ಬೇಸಿಗೆ
ಹಂಗಾಮಿಗೆ 2ನೇ ಹಂತದ ನೀರು,
ಹರಿಸಲು ನೀರಾವರಿ ಸಲಹ
ಸಮಿತಿ ಸಭೆ ತೀರ್ಮಾನಿಸಿದೆ.
ಚಿತ್ರದುರ್ಗ ಡಿಸಿ ವೆಂಕಟೇಶ್
ಅಧ್ಯಕ್ಷತೆಯಲ್ಲಿ ವಿವರವಾಗಿ ಚರ್ಚಿಸಲಾಗಿದೆ.
25 ದಿನ ನೀರು
ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಜಲಾಶಯದ ಅಚ್ಚುಕಟ್ಟು
ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ನೀರು ಹರಿಸಲಾಗುತ್ತದೆ ಎಂದು
ಡಿಸಿ ತಿಳಿಸಿದ್ದಾರೆ.